ಕೊಪ್ಪಳ,ಜ. 10 : ಮಕ್ಕಳಿರಲಿ ಮನೆ ತುಂಬ ಎನ್ನುವ ದೇಶ ನಮ್ಮದು. ಮಕ್ಕಳೆಂದರೆ ದೇವರು ಸಮಾನವೆಂದು ಅರಿತ ಕೊಪ್ಪಳದ ಗವಿಸಿದ್ದೇಶ್ವರ ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ಓಡಾಡುವ ದೃಶ್ಯ ಕೊಪ್ಪಳ ಜಾತ್ರೆಯಲ್ಲಿ ಕಂಡು ಬಂದಿರುವುದು ಎಲ್ಲರ ಗಮನ ಸೆಳೆದಿದೆ.
ಗವಿ ಸಿದ್ದೇಶ್ವರ ರತೋತ್ಸವ ನೋಡಲು ಬರುವ ಲಕ್ಷಾಂತರ ಭಕ್ತರು ಅಭಿನವ ಗವಿ ಸಿದ್ದೇಶ್ವರ ಮಾಹಾಸ್ವಾಮಿಗಳು ಮಗುವೊಂದನ್ನು ಎತ್ತಿಕೊಂಡು ಓಡಾಡುತ್ತಿರುವ ಮಕ್ಕಳಿಗೆ, ಎಲ್ಲಾ ಜನರಲ್ಲಿ ಎಲ್ಲಿಲ್ಲದ ಉತ್ಸಾಹ. ಅಜ್ಜನ ಜಾತ್ರೆಗಾಗಿ ಸರ್ವರು ಸೇವೆ ಸಲ್ಲಿಸುವುದು ಒಂದು ವಿಶೇಷ. ಕಾರ್ಯಕ್ರಮವೊಂದರಲ್ಲಿ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು ಪುಟ್ಟ ಕಂದಮ್ಮನೊಂದಿಗೆ ಕಾಲ ಕಳೆದಿದ್ದು ಇನ್ನೊಂದು ವಿಶೇಷ.
ಸ್ವಾಮೀಜಿಗಳು ಕಂದಮ್ಮನನ್ನು ಎತ್ತಿಕೊಂಡು ವಿದ್ಯಾರ್ಥಿಗಳು ಊಟ ಮಾಡುತ್ತಿದ್ದ ಸ್ಥಳಕ್ಕೆ ಬಂದು ಕೆಲ ಕಾಲ ನಿಂತು, ವಿದ್ಯಾರ್ಥಿಗಳನ್ನು ಮಾತನಾಡಿಸಿಕೊಂಡು ತೆರಳಿ ಸ್ವಾಮೀಜಿ ಅವರ ಸರಳತನಕ್ಕೆ ಎಲ್ಲರೂ ಮನಸೋತಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.