ಕಾಂಗ್ರೆಸ್ ಬಗ್ಗೆ ಭಾರೀ ಒಲವು : ಉಮಾಶ್ರೀ

ಕಾಂಗ್ರೆಸ್ ಬಗ್ಗೆ ಭಾರೀ ಒಲವು : ಉಮಾಶ್ರೀ

ಮಹಾಲಿಂಗಪುರಂ : ಕೇಂದ್ರ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದುರಾಢಳಿತದ ವೈಖರಿಗೆ ಬೇಸತ್ತ ಜನತೆ ಆಡಳಿತದ ಬದಲಾವಣೆಯನ್ನು ಬಯಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಆಡಳಿತಕ್ಕೆ ತರುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಒಲವು ತೋರುತ್ತಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು. ಸಮೀರವಾಡಿಯ ಕಬ್ಬು ಬೆಳೆಗಾರರ ಸಂಘದ ರೈತ ಭವನದಲ್ಲಿ ಭಾನುವಾರ ಸಂಜೆ ನಡೆದ ತೇರದಾಳ ಮತಕ್ಷೇತ್ರದ ಸೈದಾಪುರ – ಸಮೀರವಾಡಿ ಬ್ಲಾಕ್ ಕಾಂಗ್ರೆಸ್ ಯುವ ಧುರೀಣ ಪಿಯೂಸ ಓಸ್ವಾಲ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯರು, ಮುಖಂಡರು ಹಾಗೂ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷ ಬೊಗಳೆ ಬಿಡುತ್ತಾ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಆಡಳಿತ ನಡೆಸಿದ್ದಾರೆಯೇ ಹೊರತು, ಜನಪರ ಕಾಳಜಿಯನ್ನು ಮೆರೆಯಲಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಸರ್ವ ಧರ್ಮಿಯರ ಹಕ್ಕು ಬಾಧ್ಯತೆಗಳನ್ನು ಎತ್ತಿಹಿಡಿಯುವ ಮೂಲಕ ದೇಶದಲ್ಲಿ ಒಳ್ಳೆಯ ಆಡಳಿತ ನಡೆಸುತ್ತಾ ಬಂದಿದೆ ಎಂದು ಹೇಳಿದರು.

ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಪಶ್ಚಿಮದಲ್ಲಿ ತೇರದಾಳ ಮತಕ್ಷೇತ್ರದಿಂದ ಆರಂಭವಾಗಿರುವ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೃಹತ್ ಸೇರ್ಪಡೆ, ಪೂರ್ವದಲ್ಲಿರುವ ವಿಧಾನಸೌಧದ ಅಧಿಕಾರ ಪಡೆಯುವಲ್ಲಿ ಪಕ್ಷ ಕಾರ್ಯೋನ್ಮುಖವಾಗಿದೆ ಎನ್ನುವ ಮುನ್ಸೂಚನೆ ತೋರುತ್ತಿದ್ದು, ಸೇರ್ಪಡೆ ಗೊಂಡ ತಾವು ಪಕ್ಷಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಪಕ್ಷದ ಜಯಕ್ಕೆ ಕಾರಣವಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಡಾ. ಎ.ಆರ್.ಬೆಳಗಲಿ, ಸಿದ್ದು ಕೊಣ್ಣೂರ, ಮಲ್ಲಪ್ಪ ಸಿಂಗಾಡಿ, ಕಾಶಿನಾಥ ಹುಡೆದ, ಎಚ್.ಎಸ್.ತೆಗ್ಗಳ್ಳಿ, ಲಕ್ಷ್ಮಣ ದೇಸಾರಟ್ಟಿ, ರಂಗನಗೌಡ ಪಾಟೀಲ, ಬಸವರಾಜ ಪೂಜೇರಿ, ಪರಮಾನಂದ ಪುಡರಡ್ಡಿ, ಮಲ್ಲಪ್ಪ ಗೌಂಡಿ, ಎಚ್.ಎಸ್.ಬಜಂತ್ರಿ, ಲಕ್ಕಪ್ಪ ಸವಸುದ್ದಿ, ಬಸವರಾಜ ರಾಯರ, ಪ್ರಕಾಶ ಮಮದಾಪುರ, ಪಿಯೂಸ ಓಸ್ವಾಲ, ಅಣ್ಣೆಶಗೌಡ ಉಳ್ಳಾಗಡ್ಡಿ, ವಿಠ್ಠಲ ಹೊಸಮನಿ, ಅಯೂಬ್ ಅಥಣಿ, ಪ್ರಭು ತಂಬೂರಿ, ದುಂಡಪ್ಪ ಪಟ್ಟಣಶೆಟ್ಟಿ, ಮಹಮ್ಮದ ಹುಲಿಕಟ್ಟಿ, ಬಸು ಮಾಂಗ, ಅಶೋಕ ಉಳ್ಳಾಗಡ್ಡಿ, ಸಿದ್ರಾಮ ಯರಗಟ್ಟಿ, ಶಿವಾಜಿ ದಡ್ಡಿಮನಿ, ರೂಪಾಲಿ ಸಿಂಧೆ, ಮೇಹಬೂಬ ನಧಾಪ, ರಾಜು ನಧಾಪ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos