ಅಜ್ಜನ ಜಾತ್ರೆಗೆ ಖಡಕ್ ರೊಟ್ಟಿ

ಅಜ್ಜನ ಜಾತ್ರೆಗೆ ಖಡಕ್ ರೊಟ್ಟಿ

ಕೊಪ್ಪಳ, ಜ. 7 : ದಕ್ಷಿಣ ಭಾರತ ಮಹಾ ಕುಂಭಮೇಳವೆಂದೇ ಪ್ರಖ್ಯಾತಿ ಪಡೆದಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೇ ಆರಂಭವಾಗಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆಗಾಗಿ ಜಿಲ್ಲೆಯ ಜನತೆ ರೊಟ್ಟಿ ತಯಾರಿಯಲ್ಲಿ ತೊಡಗಿದ್ದಾರೆ.
ಮಹಾಕುಂಭ ಮೇಳವೆಂದೇ ಪ್ರಖ್ಯಾತಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗಾಗಿ ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಮಹಿಳೆಯರು ರೊಟ್ಟಿ ತಯಾರಿಸುತ್ತಿದ್ದಾರೆ. ಈ ಜಾತ್ರೆ ಬಂತೆಂದೆರೆ ಸಾಕು ಕೊಪ್ಪಳದ ಮಹಿಳೆಯರಿಗೆ, ಮಕ್ಕಳಿಗೆ, ಎಲ್ಲಾ ಜನರಲ್ಲಿ ಎಲ್ಲಿಲ್ಲದ ಉತ್ಸಾಹ. ಅಜ್ಜನ ಜಾತ್ರೆಗಾಗಿ ಸರ್ವರು ಸೇವೆ ಸಲ್ಲಿಸುವುದು ಇಲ್ಲಿನ ವಿಶೇಷ. ಅದಕ್ಕಾಗಿ ಹಟ್ಟಿ ಗ್ರಾಮದ ಜನತೆ, ಈ ಜಾತ್ರೆಗಾಗಿ 2 ಕ್ವಿಂಟಾಲ್ ರೊಟ್ಟಿ ಮಾಡುತ್ತಿದ್ದಾರೆ.
ಅಜ್ಜನ ಜಾತ್ರೆಗೆ ರೊಟ್ಟಿ ಮಾಡಬೇಕೆಂದರೆ ಪ್ರತಿಯೊಬ್ಬ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ರೊಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಪ್ಪಳದ ಹಟ್ಟಿ ಗ್ರಾಮಸ್ಥರು ಇಷ್ಟೊಂದು ಪ್ರಮಾಣದಲ್ಲಿ ರೊಟ್ಟಿ ಮಾಡುತ್ತಿರುವುದನ್ನು ಅರಿತ ಗವಿಸಿದ್ದೇಶ್ವರ ಅಜ್ಜರು ಗ್ರಾಮಕ್ಕೆ ಆಗಮಿಸಿ ಗ್ರಾಮದ ಮಹಿಳೆಯರು ಮತ್ತು ಮಕ್ಕಳ ಸೇವೆಯನ್ನು ನೋಡಿ ಆಶೀರ್ವಾದಿಸಿದರು.
ಇದೇ ತಿಂಗಳ 12 ರಂದು ಗವಿಸಿದ್ದೇಶ್ವರ ಜಾತ್ರೆ ಇದೆ. ಹೀಗಾಗಿ ಪ್ರತಿವರ್ಷದಂತೆ ಈ ವರ್ಷವು ಕೂಡ ಜಾತ್ರೆಯ ಸಡಗರ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿದೆ. ಅಜ್ಜನ ಜಾತ್ರೆಗೆ ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ಗ್ರಾಮಸ್ಥರು ತಮ್ಮ ತಮ್ಮ ಕೈಲಾದ ಸೇವೆಯನ್ನು ಚಾಚು ತಪ್ಪದೇ ಮಠಕ್ಕೆ ಅರ್ಪಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos