ಬೆಂಗಳೂರು, ಡಿ. 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರ ಪುಣ್ಯ ಸ್ಮರಣೆ (ಮಹಾ ಪರಿ ನಿರ್ವಾಣ ದಿನ) ಅಂಗವಾಗಿ ಇಂದು ಪಾಲಿಕೆ ಕೇಂದ್ರ ಕಛೇರಿಯ ಆವರಣದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಪೂಜ್ಯ ಮಹಾಪೌರರು, ಮಾನ್ಯ ಆಯುಕ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
ಈ ವೇಳೆ ಜೆಡಿಎಸ್ ಪಕ್ಷದ ನಾಯಕರಾದ ಮಾನ್ಯ ನೇತ್ರನಾರಾಯಣ್, ಜಂಟಿ ಆಯುಕ್ತರಾದ ವೀರಭದ್ರಸ್ವಾಮಿ, ಚಿದಾನಂದ್, ಮುಖ್ಯ ಅಭಿಯಂತರರುಗಳಾದ ಪ್ರಸಾದ್, ಮುದ್ದುರಾಜ್, ವಿಶ್ವನಾಥ್, ಅಧೀಕ್ಷಕ ಅಭಿಯಂತರರಾದ ಲೋಕೇಶ್, ಬಸವರಾಜ್ ಕಬಾಡೆ ಹಾಗೂ ಇತರೆ ಅಧಿಕಾರಿಗಳು ಇದ್ದರು.