ಲಕ್ನೋ, ಅ.28 : ನಾಲ್ಕು ತಿಂಗಳ ಬಳಿಕ ಪರಾರಿಯಾಗಿದ್ದ ಪತ್ನಿ ವಾಪಸ್ ಆಗಿದ್ದಾಳೆ. ಯಾಕಮ್ಮ ಹೀಗೆ ಮಾಡಿದೆ ಅಂತಾ ಪೊಲೀಸರು ಕೇಳಿದ್ದಕ್ಕೆ ಮೊಟ್ಟೆ ರಹಸ್ಯ ಬಿಚ್ಚಿಟ್ಟಿದ್ದಾಳೆ.
ಪತಿ ತನಗೆ ಮೊಟ್ಟೆ ತಂದು ಕೊಡಲಿಲ್ಲ ಅಂತಾ ಪತ್ನಿ ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಗೋರಕ್ಪುರದಲ್ಲಿ ನಡೆದಿದೆ.
ಕಂಪೀರ್ ಗಂಜ್ ಪ್ರದೇಶದಲ್ಲಿ ದಂಪತಿ ವಾಸವಿದ್ರು. ಈ ವೇಳೆ ಪತ್ನಿ ಮೊಟ್ಟೆಗಾಗಿ ಗಂಡನನ್ನು ಪೀಡಿಸುತ್ತಿದ್ದಳಂತೆ. ಈ ಬಗ್ಗೆ ದೂರು ನೀಡಿರುವ ಪತಿ, ತಾನು ಕಾರ್ಮಿಕನಾಗಿದ್ದು, ಮೊಟ್ಟೆ ತಂದುಕೊಡಲು ಆಗುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಆಕೆಯ ಪ್ರಿಯಕರ ಪ್ರತಿದಿನ ಮೊಟ್ಟೆ ತಂದುಕೊಟ್ಟು ಇಂಪ್ರೆಸ್ ಮಾಡಿ ಕರೆದೊಯ್ದಿದ್ದಾನೆ ಅಂತಾ ದೂರು ದಾಖಲಿಸಿದ್ದಾರೆ.