ಡೆಹ್ರಾಡೂನ್, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಈಗಿನ ಪರಿಸ್ಥಿತಿ ಹೇಗಾಗಿದೆಯೆಂದರೆ ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಇದಕ್ಕೆ ಉದಾಹರಣೆಯೊಂದು ಇಲ್ಲಿದೆ. ಹೀಗೆ ಹೇಳಲು ಕಾರಣವೆಂದರೆ ಇಲ್ಲಿ ಪೊಲೀಸರೇ ಜನರನ್ನು ಲೂಟಿ ಮಾಡಿದ್ದಾರೆ. ಡೆಹ್ರಾಡೂನ್ನಲ್ಲಿ ಅನುರೋಧ್ ಪವಾರ್ ಎನ್ನುವವರ ಕಾರನ್ನು ಪೊಲೀಸರು ಚುನಾವಣೆ ತಪಾಸಣೆಗೆ ನಿಲ್ಲಿಸಿದ್ದು ನಂತರ ನೀತಿ ಸಂಹಿತೆಯೆಂದು ಪೊಲೀಸ್ ವಾಹನದಲ್ಲಿ ಕೂರಿಸಿ ಅವರ ಹತ್ತಿರ ಇದ್ದ 1 ಕೋಟಿ ರೂಪಾಯಿಯನ್ನು ಲೂಟಿ ಮಾಡಿದ್ದಾರೆ. ಈ ಕೃತ್ಯದಲ್ಲಿ ದಿನೇಶ್ ನೇಗಿ ಎನ್ನುವ ಇನ್ಸ್ ಪೆಕ್ಟರ್ ಹಾಗೂ ಹಿಮಾಂಶು ಮತ್ತು ಅನುಪಮ್ ಎನ್ನುವ ಪೇದೆಗಳು ಭಾಗಿಯಾಗಿದ್ದು ಕೃತ್ಯಕ್ಕೆ ಐಜಿಯವರ ಕಾರನ್ನೇ ಬಳಸಿದ್ದು ಇದೀಗ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ಮೂವರನ್ನು ಅಮಾನತು ಮಾಡಿದ್ದು, ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.