ರಾಯಚೂರು, ನ, 20 : ಸಿಲಿಂಡರ್ ಸ್ಫೋಟ್ ಗೊಂಡ ಹಿನ್ನಲೆ ಮನೆಯಲ್ಲಿರುವ ವಸ್ತು ಕರಕಲಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಸ್ಕಿ ತಾಲ್ಲೂಕಿನ ಕಣೂರು ಗ್ರಾಮದ ಚಿದಾನಂದ ಸಿಂಗ್ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡು, ಎರಡು ಸಿಲಿಂಡರುಗಳು ಸ್ಫೋಟಗೊಂಡ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ. ವಯೋವೃದ್ಧೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.