ಚಿಕ್ಕಮಗಳೂರು. ಜ. 5 : ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲೇ ಮಗು ಕಳ್ಳತನವಾಗಿರೋ ಘಟನೆ ನಡೆದಿದೆ. ಕಾಫಿನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದ ಅಸ್ಸಾಂ ಮೂಲದ ಸುನಿಲ್ ಹಾಗೂ ಅಂಜಲಿ ದಂಪತಿಯೇ ಮಗು ಕಳೆದುಕೊಂಡು ದುರ್ದೈವಿಗಳು.
ಕಳೆದ ಆರು ವರ್ಷಗಳಿಂದ ಚಿಕ್ಕಮಗಳೂರಿನಲ್ಲೇ ವಾಸವಿದ್ದ ಅಸ್ಸಾಂ ಮೂಲದ ಸುನಿಲ್ ಕಳೆದ ವರ್ಷ ಅಸ್ಸಾಂ ಮೂಲದ ಅಂಜಲಿ ಎಂಬುವರನ್ನ ವಿವಾಹವಾಗಿದ್ರು. ಅವರಿಗೆ ಜನವರಿ 1ನೇ ತಾರೀಕು ಚಿಕ್ಕಮಗಳೂರು ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿತ್ತು. ಆದರೆ, ನಾಲ್ಕು ದಿನದ ಮಗುವನ್ನ ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ಬಂದು ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ.