ಬಿಜೆಪಿ 2 ಸ್ಥಾನದಲ್ಲಿ ಗೆಲ್ಲಲೇ ಬೇಕು :ಪರಮೇಶ್ವರ

ಬಿಜೆಪಿ 2 ಸ್ಥಾನದಲ್ಲಿ ಗೆಲ್ಲಲೇ ಬೇಕು :ಪರಮೇಶ್ವರ

ಮೈಸೂರು, ನ. 25 : ಉಪಚುನಾವಣೆಯಲ್ಲಿ ಬಿಜೆಪಿಗೆ 8 ಸ್ಥಾನ ಬೇಕು. ಬಿಜೆಪಿ ಸರ್ಕಾರ ಸೇಫ್ ಆಗಿ ಉಳಿಯುವುದು. ಇಲ್ಲದಿದ್ದರೆ ಉರುಳುತ್ತದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರು ಬಿಜೆಪಿ ಸರ್ಕಾರದ ಬಗ್ಗೆ ಭವಿಷ್ಯ ನುಡಿದರು.
ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಒಂದು ವೇಳೆ 8ಕ್ಕಿಂತ ಅಧಿಕ ಸ್ತಾನ ಗೆದ್ದರೂ, ಒಂದೆ ಒಂದು ಸ್ಥಾನ ಜಾಸ್ತಿ ಇಟ್ಕೊಂಡು ಸರ್ಕಾರ ಮಾಡ್ತಿರಾ? ಅವತ್ತಿನ ಸಂಜೆ ಇಬ್ಬರು ನಾಯಕರು ನಮ್ಮ ಪಕ್ಷಕ್ಕೆ ಬಂದರೆ ಏನ್ ಮಾಡ್ತೀರಾ? ಎಂದರು.
ಬಿಜೆಪಿ ಅಭ್ಯರ್ಥಿ ಹೆಚ್ ವಿಶ್ವನಾಥ್ ಗೆದ್ದರೆ ಮಂತ್ರಿ ಆಗ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರ ಇದ್ದರಲ್ಲವೇ? ಇವರು ಮಂತ್ರಿ ಆಗುವುದು. ಸರ್ಕಾರ ಇರದೆ ಇದ್ದರೆ ಅದೇಗೆ ಮಂತ್ರಿ ಆಗ್ತಾರೆ ಎಂದು ಡಾ.ಜಿ ಪರಮೇಶ್ವರ್ ಅವರು ಹೆಚ್.ವಿಶ್ವನಾಥ್ಗೆ ಟಾಂಗ್ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos