ಹಳೆಮನೆ ನೆಲಸಮ ವೃದ್ಧ ದಂಪತಿ ಕಂಗಾಲು

ಹಳೆಮನೆ ನೆಲಸಮ ವೃದ್ಧ ದಂಪತಿ ಕಂಗಾಲು

ಪೀಣ್ಯ :ದೇವಾಲಯದ ಪಕ್ಕದಲ್ಲಿದ್ದ ಹಳೆಮನೆಯನ್ನು ರಾತ್ರೋರಾತ್ರಿ ಸ್ಥಳೀಯ ಮುಖಂಡರು ಜೆಸಿಬಿಗಳ ಮೂಲಕ ನೆಲಸಮಮಾಡಿದ್ದು ವೃದ್ಧ ದಂಪತಿಗಳು ಕಂಗಾಲಾಗಿದ್ದಾರೆ, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮಪಂಚಾಯಿತಿಯ ಶಿವನಪುರ ಗ್ರಾಮದಲ್ಲಿ ವೃದ್ಧ ದಂಪತಿಗಳು ವಾಸವಾಗಿದ್ದ ಮಣ್ಣಿನ ಮನೆಯು ಮಳೆಯಿಂದ ಸ್ವಲ್ಪಜಾಗ ಕುಸಿತವಾದ ಕಾರಣ ಅರಿಶಿನಕುಂಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದನ್ನು ಮನಗಂಡ ಕೆಲವರು ದೇವಸ್ಥಾನದ ಪಕ್ಕದಲ್ಲಿ ಹಳೆಮನೆ ಇರುವುದು ಸರಿಯಲ್ಲ ಎಂಬ ನೆಪ ಹೇಳಿ ಮಾಲೀಕರ ಗಮನಕ್ಕೆ ತರದೇ ರಾತ್ರೋರಾತ್ರಿ ನೆಲಸಮಮಾಡಿದ್ದಾರೆ. ತಡವಾಗಿ ಮಾಹಿತಿ ಪಡೆದ ವೃದ್ಧ ದಂಪತಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ದೇವಾಲಯದ ನೆಪ
ಅನೇಕ ಬಾರಿ ವೃದ್ಧ ದಂಪತಿಗಳಿಗೆ ಹಳೆಯ ಮನೆಯ ಜಾಗವನ್ನು ಮಾರುವಂತೆ ಒತ್ತಾಯಿಸುತಿದ್ದ ಮುಖಂಡರು ದಂಪತಿಗಳು ಬಾಡಿಗೆ ಮನೆಗೆ ಹೋಗುತಿದ್ದಂತೆ ದೇವಾಲಯದ ಪಕ್ಕದಲ್ಲಿ ಹಳೆಮನೆ ಇದೆ ಎಂದು ಸ್ಥಳೀಯರಿಗೆ ನೆಪ ಹೇಳಿ ನೆಲಸಮಮಾಡಿದ್ದು ಕೇಳಲು ಹೋದವರಿಗೆ ಧಮ್ಕಿ ಹಾಕುತಿದ್ದಾರೆ ಎಂದು ವೃದ್ಧ ಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.
ಪೊಲೀಸರ ಪರಿಶೀಲನೆ ಕೇಸು ದಾಖಲು

ಫ್ರೆಶ್ ನ್ಯೂಸ್

Latest Posts

Featured Videos