ರೌಡಿಗಳಿಗೆ ಅಲೋಕ್ ಕುಮಾರ್ ಖಡಕ್ ವಾರ್ನಿಂಗ್..!

ರೌಡಿಗಳಿಗೆ ಅಲೋಕ್ ಕುಮಾರ್ ಖಡಕ್ ವಾರ್ನಿಂಗ್..!

ಬೆಂಗಳೂರು, ಏ. 13, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಗೆ ಇನ್ನು ಐದೇ ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಿನ್ನೆ 300 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯಲ್ಲಿ ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ರೌಡಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಾಲಬಿಚ್ಚಿದ್ರೆ, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ರೌಡಿ ಪರೇಡ್‍ನಲ್ಲಿ ಸೈಲೆಂಟ್ ಸುನೀಲ, ಶಿವಾಜಿನಗರದ ತನ್ವೀರ್, ಮಾರೇನಹಳ್ಳಿ ಜಗ್ಗ, ಕುಣಿಗಲ್ ರವಿ, ಒಂಟೆ ರೋಹಿತ, ಗುಜರಿ ಆಸೀಫ್‍, ದಡಿಯಾ ಮಹೇಶ್, ರಾಬ್ರಿ ಗಿರಿ ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ರೌಡಿಗಳಿಗೆ ಬುದ್ದಿ ಹೇಳುವಾಗ ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಸೈಲೆಂಟ್ ಸುನೀಲ್ ಗುರಾಯಿಸುತ್ತಿದ್ದ. ಹೀಗಾಗಿ ಕಿವಿ ಹಿಂಡಿ ಬುದ್ದಿವಾದ ಹೇಳಿದ ಅಲೋಕ್‍ ಕುಮಾರ್, ಇವನು ಯಾರ್ ಯಾರ ಬಳಿ ಹಣ ವಸೂಲಿ ಮಾಡ್ತಿದ್ದಾನೆ ಎಂದು ಪರಿಶೀಲಿಸಿ ಕೇಸ್ ದಾಖಲಿಸಿ ಎಂದು ಎಸಿಪಿಗೆ ಸೂಚಿಸಿದ್ದಾರೆ. ಇದೇ ವೇಳೆ ರೌಡಿ ಕುಣಿಗಲ್ ಗಿರಿಗೆ, ಡಿಸಿಪಿ ಗಿರೀಶ್ ಬೆಂಡೆತ್ತಿದ್ದಾರೆ. ಫೇಮಸ್ ಆಗೋಕೆ ಹೊರಟಿದ್ದೀಯಲ್ಲಾ ನಿನಗೆ ಮದುವೆಯಾಗಿದಿಯಾ ಅಂತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅವನು, ಮದುವೆ ಆಗಿಲ್ಲ ಹುಡುಗಿ ಹುಡುಕ್ತಿದ್ದಾರೆ ಅಂತಾ ಹೇಳಿದ್ದಾನೆ. ಆಗ ಡಿಸಿಪಿ ನೀನು ಮದುವೆಯಾಗೋಕೆ ಹೋಗಬೇಡ, ನಿನ್ನ ಕಳ್ಳಾಟಗಳು ಗೊತ್ತಾಗಿವೆ. ನೀನು ತುಂಬಾ ದಿನ ಉಳಿಯಲ್ಲ ಅಂತಾ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಕೂದಲು, ಗಡ್ಡ ಬಿಟ್ಟುಕೊಂಡಿದ್ದ ರೌಡಿಗಳಿಗೆ ಕತ್ತರಿಸಿಕೊಳ್ಳುವಂತೆ, ಖಡಕ್ ವಾರ್ನಿಂಗ್ ನೀಡಿ, ಎಲ್ಲ ರೌಡಿಗಳ ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos