ಚಿಕ್ಕಬಳ್ಳಾಪುರ , ಮಾ.25, ನ್ಯೂಸ್ ಎಕ್ಸ್ ಪ್ರೆಸ್ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಲಿದ್ದು ಅದಕ್ಕೂ ಮುಂಚೆ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಮನೆ ದೇವರ ಮೊರೆ ಹೋದರು.
ಇಂದು ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿರುವ ಚನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಪತ್ನಿ, ಮಗ ಸೇರಿದಂತೆ ಕುಟುಂಬ ಸಮೇತ ಭೇಟಿಯನ್ನ ನೀಡಿ ವಿಶೇಷ ಪೂಜೆಯನ್ನ ಸಲ್ಲಿಸಿದರು.
ಜತೆಗೆ ನಾಮಪತ್ರವನ್ನ ದೇವರ ಪಾದದ ಬಳಿ ಇಟ್ಟು ಈ ಭಾರಿ ಗೆಲ್ಲುವ ಶಕ್ತಿ ಕೊಡುವಂತೆ ಬಚ್ಚೇಗೌಡ ದೇವರಲ್ಲಿ ಪ್ರಾರ್ಥಿಸಿದರು. ಇನ್ನೂ ಪೂಜೆ ಸಲ್ಲಿಸಿ ಮಾತನಾಡಿದ ಬಚ್ಚೇಗೌಡರು ಈ ಭಾರಿ ಮೋದಿ ಪ್ರಧಾನಿಯಾಗಬೇಕೆಂಬ ಬಯಕೆ ಎಲ್ಲರಲ್ಲಿದ್ದು ಗೆದ್ದೆ ಗೆಲ್ಲುತ್ತೇನೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಈ ಭಾಗದಲ್ಲಿ ಹಾಲಿ ಸಂಸದ ಎತ್ತಿನಹೊಳೆ ಯೋಜನೆ ಹೆಸರು ಹೇಳಿ ಜನರಿಗೆ ಮಣ್ಣೇರೆಚುವ ಕೆಲಸ ಮಾಡ್ತಿದ್ದು, ಯಾವುದೇ ಅಭಿವೃದ್ದಿ ಕಳೆದ 10 ವರ್ಷ ಗಳಿಂದ ಆಗಿಲ್ಲ. ಹೀಗಾಗಿ ಜನ ಬಚ್ಚೇಗೌಡರನ್ನ ಗೆಲ್ಲಿಸುವ ತಿರ್ಮಾನ ಮಾಡಿದ್ದಾರೆ.
ಕಳೆದ ಭಾರಿ ಕಡಿಮೆ ಅಂತರದಲ್ಲಿ ಸೋಲನ್ನ ಕಂಡಿದ್ದು, ಈ ಭಾರಿ ನೇರ ಹಣಾಹಣಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಇದೆ ಅಂತಾ ಬಚ್ಚೇಗೌಡ ಪ್ರತಿಕ್ರಿಯಿಸಿದರು.