ತುಮಕೂರು, ಮಾ.13, ನ್ಯೂಸ್ ಎಕ್ಸ್ ಪ್ರೆಸ್: ಮಹಾ ನಗರ ಪಾಲಿಕೆ 2 ತಿಂಗಳ ಸಂಬಳವನ್ನು ನೀಡದಿರುವುದನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಮಹಾ ನಗರ ಪಾಲಿಕೆ ಮುಂದೆ ಧರಣಿ ಕುಳಿತ ಪೌರ ಕಾರ್ಮಿಕರು ತಕ್ಷಣವೇ ಬಾಕಿ ಸಂಬಳವನ್ನು ನೀಡುವಂತೆ ಆಗ್ರಹಿಸಿದರು.
ಹೋರಾಟಕ್ಕೆ ಮಣಿದ ಅಧಿಕಾರಿಗಳು ಒಂದು ತಿಂಗಳ ಸಂಬಳವನ್ನು ಕಾರ್ಮಿಕರಿಗೆ ಜಮಾ ಮಾಡಲಾಗಿದೆ. ಮತ್ತೊಂದು ತಿಂಗಳ ಸಂಬಳವನ್ನು ಶನಿವಾರದಂದು ನೀಡುವ ಭರವಸೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮೇಯರ್ ಲಲಿತಾ, ಲೆಕ್ಕಪತ್ರ ವಿಭಾಗದ ವಿಶ್ವನಾಥ್, ತುಮಕೂರು ಪೌರ ಕಾರ್ಮಿಕರ ಸಂಘ(ಸಿಐಟಿಯು)ದ ಅಧ್ಯಕ್ಷ ಸೈಯದ್ ಮುಜೀಬ್, ಕಾರ್ಯದರ್ಶಿ .ಎನ್.ಕೆ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಪಧಾದಿಕಾರಿಗಳು ಉಪಸ್ಥಿತರಿದ್ದರು.