ಹೈದರಾಬಾದ್, ಡಿ. 21 : ಮನೆಯಲ್ಲಿ ಮದುವೆಗೆ ಒಪ್ಪದ್ದಕ್ಕೆ ಪ್ರೇಮಿಗಳಿಬ್ಬರು ಲಾಡ್ಜಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೆಳತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಗೌತಮಿ(28) ಮೃತ ಪ್ರಾಧ್ಯಾಪಕಿ. ಈಕೆ ವಿದ್ಯಾರ್ಥಿ ಲೋಕೇಶ್ (19) ನನ್ನು ಪ್ರೀತಿಸುತ್ತಿದ್ದಳು. ಪ್ರೀತಿಗೆ ಮನೆಯವರು ಒಪ್ಪಿಲ್ಲವೆಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಏನಿದು ಪ್ರಕರಣ.?
ಮೃತ ಗೌತಮಿ ಗನ್ನವರಂ ಮಂಡಲ ತೆಂಪಲ್ಲಿ ನಿವಾಸಿಯಾಗಿದ್ದು, ಉಷಾರಾಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಲೋಕೇಶ್ ಅದೇ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದನು.
ಗಾಂಧಿನಗರದ ಜಗಪತಿ ಲಾಡ್ಜ್ಗೆ ಹೋಗಿ ರೂಮ್ ಬುಕ್ ಮಾಡಿದ್ದಾರೆ. ಹಬ್ಬಕ್ಕೆ ಶಾಪಿಂಗ್ ಮಾಡಲು ಆಗಮಿಸಿದ್ದಾಗಿ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದರು. ರೂಮಿಗೆ ತೆರಳಿದ್ದ ಇಬ್ಬರು ಜ್ಯೂಸಿನಲ್ಲಿ ಕೀಟನಾಶಕ ಔಷಧಿ ಬೆರೆಸಿ ಕುಡಿದಿದ್ದಾರೆ.