ಹಾಸನ, ಡಿ. 16 : ನಂಬಿಹಳ್ಳಿಯಲ್ಲಿ ಜೆಡಿಎಸ್ -ಬಿಜೆಪಿ ಕಾರ್ಯಕರ್ತರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಎ.ಮಂಜು ಅವರು ಪ್ರತಿಕ್ರಿಯೆ ನೀಡಿದ್ದು, ಸೂರಜ್ ರೇವಣ್ಣ ಅವರು ಹೊಡೆಯಿರಿ ಅಂತ ಮಾತನಾಡಿರುವ ಆಡೀಯೋ ಇದೆ ಎಂದು ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಹೀಗಾಗಿ ಸೂರಜ್ ರೇವಣ್ಣ ಅವರನ್ನು ಎ1 ಆರೋಪಿ ಮಾಡಿದ್ದಾರೆ. ಎಲ್ಲ ಸಾಕ್ಷ್ಯ ಇಟ್ಟುಕೊಂಡು ಅವರನ್ನು ಆರೋಪಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಅಲ್ಲದೆ, ಗಲಾಟೆಗೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಯಾರೇ ಪ್ರಭಾವ ಬೀರಿದರು ಸೆಕ್ಷನ್ ೩೦೭ ಅನ್ನು ತಪ್ಪಿಸಲು ಸಧ್ಯವೇ ಇಲ್ಲ. ತುರ್ತಾಗಿ ಆರೋಪಿಗಳನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹ ಮಾಡಿದರು.
ಇನ್ನು ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ದದ ಕೇಸ್ ನಮ್ಮ ಪರವಾಗಿ ಬರುತ್ತದೆ. ಹಾಗಾಗಿ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳ ಬಳಿಗೆ ಬಂದು ಅದಷ್ಟು ಬೇಗ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳಬೇಕು ಎಂದಿದ್ದೇನೆ ಎಂದರು.
ಸದ್ಯ ಚುನವಾಣೆಯ ಸಂದರ್ಭದಲ್ಲಿ ರೇವಣ್ಣ ವಿರುದ್ದ ದೂರು ದಾಖಲು ಮಾಡಬೇಕು ಅಂತ ಚುನಾವಣಾ ಆಯೋಗದಿಂದ ಪತ್ರ ಬಂದಿದೆ, ಇದರ ಕೆಲಸ ನಿಮಿತ್ತ ಬಂದಿದ್ದೇನೆ ಎಂದು ಹಾಸನದಲ್ಲಿ ಬಿಜೆಪಿ ನಾಯಕ ಎ.ಮಂಜು ಅವರು ನುಡಿದರು.