ಜೈಪುರ್, ನ. 23 : ಅಪಘಾತಕ್ಕೀಡಾಗುತ್ತಿದ್ದ ಗೂಳಿಯನ್ನು ರಕ್ಷಿಸುವ ಯತ್ನದಲ್ಲಿ ಮಿನಿ ಬಸ್ಸೊಂದು ಉರುಳಿ ಬಿದ್ದು ಮರಕ್ಕೆ ಅಪ್ಪಳಿಸಿದ ಪರಿಣಾಮ 12 ಮಂದಿ ಮೃತಪಟ್ಟು ಇತರ 10 ಜನರು ತೀವ್ರ ಗಾಯಗೊಂಡಿರುವ ಘಟನೆ ರಾಜಸ್ತಾನದ ನಾಗೌರ್ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ನಲ್ಲಿದ್ದ ನತದೃಷ್ಟ ಪ್ರಯಾಣಿಕರು ಮಹಾರಾಷ್ಟ್ರದ ಲಾತೂರ್ ಮತ್ತು ಶೋಲಾಪುರ್ನಿಂದ ಹರಿಯಾಣದ ಹಿಸಾರ್ದಲ್ಲಿ ಧರ್ಮಗುರು ಭೇಟಿ ಮತ್ತು ಆಶೀರ್ವಾದಕ್ಕೆ ತೆರಳುತ್ತಿದ್ದಾಗ ಘೋರ ದುರಂತ ಸಂಭವಿಸಿದೆ.