ಕೆ.ಆರ್.ಪುರ: ರಾಮ ಮಂದಿರ, ಹಿಂದುತ್ವ ವಿರೋಧಿ ನಡೆಯಿಂದಾಗಿ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಪ್ರಮುಖ ಕಾರಣ ಎಂದು ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಮಾರತ್ತಹಳ್ಳಿ ಬ್ರಿಡ್ಜ್ ಬಳಿ ಶ್ರೀ ಸಾಯಿ ಆಂಜನೇಯ ಸ್ವಾಮಿ ಟ್ರಸ್ಟ್ ನಿಂದ ನಿರ್ಮಿಸಿರುವ ೨೮ ಅಡಿ ಎತ್ತರದ ಆಂಜನೇಯ ಪ್ರತಿಮೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಮಮಂದಿರ ನಿರ್ಮಾಣಕ್ಕಿಂತ ತ್ರಿವಳಿ ತಲಾಖ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ತಪ್ಪು. ಮೋದಿ ಮತ್ತು ಬಿಜೆಪಿಯನ್ನ ಜನ ತಿರಸ್ಕರಿಸಿದ್ದಾರೆ. ದೇಶದಲ್ಲಿ ಬಿಜೆಪಿಗೆ ಇನ್ನೂ ತೀವ್ರವಾದ ಹಿನ್ನಡೆ ಆಗಲಿದೆ ಎಂದು ಪ್ರವೀಣ್ ತೊಗಾಡಿಯಾ ಭವಿಷ್ಯ ನುಡಿದಿದ್ದಾರೆ.