ರಾಜ್ಯದಲ್ಲಿ ಜನರು ಅನಾಥರಾಗಿದ್ದಾರೆ : ವಿಧಾನ ಪರಿಷತ್ ಸದಸ್ಯೆ ತಾರಾ

ರಾಜ್ಯದಲ್ಲಿ ಜನರು ಅನಾಥರಾಗಿದ್ದಾರೆ : ವಿಧಾನ ಪರಿಷತ್ ಸದಸ್ಯೆ ತಾರಾ

ಬೆಳಗಾವಿ, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣೆ ರಾಜ್ಯದಲ್ಲಿ ನಡೆಯುತ್ತಿದೆಯೋ ಅಥವಾ ದೇಶದಲ್ಲಿ ನಡೆಯುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಇಡೀ ಮಂತ್ರಿಗಳು ಸೇರಿ ಸರ್ಕಾರವೇ ಮಂಡ್ಯದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾದ ಸರ್ಕಾರಕ್ಕೆ ಪರೋಕ್ಷ ಟಾಂಗ್ ನೀಡಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಪದ ಬಳಕೆ ಸರಿಯಾಗಿ ಇರಬೇಕು.ಚುನಾವಣೆ ಸಂದರ್ಭದಲ್ಲಿ ಟಿಕೆ ಸಹಜ ಆದರೆ ವ್ಯಯಕ್ತಿ ವಿಷಯಗಳಿಗೆ ಆಸ್ಪದವಾಗಿರಬಾರದು ಎಂದರು. ಅಲ್ಲದೆ ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಬಲಿಷ್ಠ ಭಾರತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಜನ ಬಯಸಿದ್ದಾರೆ. ಬೆಳಗಾವಿಯಲ್ಲಿ ಇಲ್ಲಿ ಸುರೇಶ ಅಂಗಡಿ ಅವರ ಗೆಲುವು ಖಚಿತ ಎಂದು ಚಿತ್ರನಟಿ ತಾರಾ ಹೇಳಿದರು. ಇನ್ನೂ ಮಾಧ್ಯಮದವರು ನಿಖಿಲ್ ಎಲ್ಲಿದಿಯಪ್ಪಾ ಎಂಬ ಚಿತ್ರವೊಂದು ನಿರ್ಮಾಣವಾದರೆ ನಟಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ಒಳ್ಳೆಯ ಪಾತ್ರ ದೊರೆತರೆ ಕಂಡಿತಾ ನಟಿಸುತ್ತೆನೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos