ಬೆಂಗಳೂರು, ಡಿ. 26 : ಸಿಎಂ ಯಡಿಯೂರಪ್ಪರದ್ದು ವೃಶ್ಚಿಕ ರಾಶಿ. ಗ್ರಹಣ 6 ರಾಶಿ ಅವ್ರಿಗೆ ಹೆಚ್ಚು ಅಪಾಯ ತರುತ್ತೆ ಅಂತ ಜ್ಯೋತಿಷಿಗಳು ಹೇಳಿದ್ದಾರೆ. ಈ ರಾಶಿಗೂ ಕಂಟಕ ಇದೆ ಅಂತ ಜ್ಯೋತಿಷಿಗಳು ತಿಳಿಸಿದ್ದಾರೆ. ವೈಜ್ಞಾನಿಕ ಹಿನ್ನೆಲೆ ಗ್ರಹಣ ಯಾವುದೇ ಆತಂಕ ತರೋದಿಲ್ಲ. ಆದ್ರೆ ಆಚಾರ-ವಿಚಾರ, ರಾಶಿ- ಗೋತ್ರ-ಫಲ, ದೇವರು ಅಂತ ನಂಬೋರಿಗೆ ಈ ಗ್ರಹಣ ಸಿಕ್ಕಾಪಟ್ಟೆ ಭಯ ಹುಟ್ಟಿಸಿದೆ. ಭಯ ರಾಜ್ಯದ ದೊರೆ ಸಿಎಂ ಯಡಿಯೂರಪ್ಪಗೂ ಬಿಟ್ಟಿಲ್ಲ.
ಸಿಎಂ ಹೋಮ –ಹವನ :
ದೇವಸ್ಥಾನ, ಹೋಮ-ಹವನ ಮಾಡಿಸುತ್ತಾ ಇರ್ತಾರೆ. ಗ್ರಹಣಕ್ಕೂ ಸಿಎಂ ಯಡಿಯೂರಪ್ಪ ಹೋಮ-ಹವನದ ಮೊರೆ ಹೋಗಿದ್ದಾರೆ. ಮೊನ್ನೆಯಷ್ಟೆ ಕೇರಳದ ಪ್ರಸಿದ್ದ ದೇವಾಲಯದಲ್ಲಿ ವಿಶೇಷ ಪೂಜೆ ಕೂಡಾ ಸಲ್ಲಿಕೆ ಮಾಡಿದ್ದಾರೆ. ಶತ್ರು ನಾಶ, ಸರ್ಕಾರ ಉಳಿವಿಗಾಗಿ ಸಿಎಂ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.