ಬೆಂಗಳೂರು, ಡಿ. 16: ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಇಂದು ವಿಜಯ ದಿವಸ್ ಆಚರಣೆ ಮಾಡಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲಾಯಿತು. ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ಯುದ್ದದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಕೆ ಮಾಡಿದರು. ಬಳಿಕ ಮಾತನಾಡಿದ ಸಿಎಂ ಬಿಎಸ್ವೈ, “ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅತ್ಯಂತ ಹೆಮ್ಮೆಯಿಂದ ಪಾಲ್ಗೊಂಡಿದ್ದೇನೆ. ಹುತಾತ್ಮ ಯೋಧರ ಕುಟುಂಬದ ಜೊತೆ ಸರ್ಕಾರ ಇದೆ. ಯೋಧರ ಕುಟುಂಬಕ್ಕೆ ಅಗತ್ಯ ಎಲ್ಲಾ ಸವಲತ್ತು ಸರ್ಕಾರ ನೀಡುತ್ತದೆ,” ಎಂದು ಭರವಸೆ ನೀಡಿದರು.
ಹುತಾತ್ಮ ಯೋಧರ ಕುಟುಂಬದ ಕಲ್ಯಾಣಕ್ಕೆ ನೀಡುತ್ತಿರುವ ಅನುದಾನ ಒಂದು ಕೋಟಿ ಹೆಚ್ಚಳ ಮಾಡಿಲಾಗಿದೆ. ವೀರ ಚಕ್ರ, ಶೌರ್ಯ ಚಕ್ರಕ್ಕೆ ನೀಡುವ ಗೌರವ ಧನ 25 ಸಾವಿರಕ್ಕೆ ಹೆಚ್ಚಳ, ಸೇನಾ ಮೆಡಲ್ ಗೌರವ ಧನ 2 ಲಕ್ಷದಿಂದ 15 ಲಕ್ಷ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.