ಸ್ನೇಹಿತ್ ಗೌಡಗೆ ಎಷ್ಟು ಹೇಳಿದರು ಬುದ್ದಿ ಇಲ್ಲಾ!

ಸ್ನೇಹಿತ್ ಗೌಡಗೆ ಎಷ್ಟು ಹೇಳಿದರು ಬುದ್ದಿ ಇಲ್ಲಾ!

ಬೆಂಗಳೂರು: ಬಿಗ್‌ ಬಾಸ್‌ ನಲ್ಲಿ ವೀಕೆಂಡ್‌ ಬಂತೆಂದರೆ ಸಾಕು ಸುದೀಪ್‌ ಅವರು ಸ್ನೇಹಿತ್ ಗೌಡಗೆ ಎಷ್ಟು ಬುದ್ದಿವಾದ ಹೇಳಿದರು ಅದನ್ನು ಅರ್ಥ ಮಾಡಿಕೊಳ್ಳದ ಸ್ನೇಹಿತ್.  ನಾಯಿಬಾಲ ಯಾವತ್ತಿದ್ದು ಡೊಂಕು ಎನ್ನುವ ರೀತಿಯಲ್ಲಿ ಇವರು ಆಟ ಆಡುತ್ತಿದ್ದಾರೆ.

ಸ್ನೇಹಿತ್ ಗೌಡ ಅವರು ಬಿಗ್ ಬಾಸ್​ನಲ್ಲಿ ಸದಾ ವಿನಯ್​ ಪರವಾಗಿ ಇರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಾರ ಕ್ಯಾಪ್ಟನ್ ಆದ ಸ್ನೇಹಿತ್​ಗೆ ಒಂದು ಗೋಲ್ಡನ್ ಅವಕಾಶ ಸಿಕ್ಕಿತ್ತು. ಆದರೆ, ಇದನ್ನು ಅವರು ಕೈಚೆಲ್ಲಿದ್ದಾರೆ. ಇದಕ್ಕೆ ಅವರು ವೀಕೆಂಡ್​ನಲ್ಲಿ ಸಾಕಷ್ಟು ದಂಡ ತೆತ್ತಬೇಕಾಗಿ ಬರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಸ್ನೇಹಿತ್ ಗೌಡ ಅವರು ದೊಡ್ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ದುಪಟ್ಟು ಅಧಿಕಾರವನ್ನು ಬಿಗ್ ಬಾಸ್ ನೀಡಿದ್ದಾರೆ. ಈ ಅಧಿಕಾರದ ಪ್ರಕಾರ ಈ ವಾರ ನಾಮಿನೇಷನ್ ಮಾಡುವ ಸಂಪೂರ್ಣ ಅಧಿಕಾರ ಸ್ನೇಹಿತ್​ಗೆ ಇತ್ತು. ಹೀಗಾಗಿ ಅವರು ತಮ್ಮ ತಂಡದವರನ್ನು ಸೇವ್ ಮಾಡಿದ್ದಾರೆ. ವಿನಯ್, ನಮ್ರತಾ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

ಈ ವಾರ ತಂಡ ಮಾಡುವ ಆಯ್ಕೆಯನ್ನು ಬಿಗ್ ಬಾಸ್ ಸ್ನೇಹಿತ್​​ಗೆ ನೀಡಿದ್ದರು. ಈ ವೇಳೆ ತಂಡ ಸಮಬಲ ಆಗಿರುವಂತೆ ನೋಡಿಕೊಳ್ಳಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದ್ದರು. ಆದಾಗ್ಯೂ ಅವರು ತಮ್ಮ ಹಳೆಯ ಚಾಳಿಯನ್ನು ಮಂದುವರಿಸಿದರು. ವಿನಯ್, ನಮ್ರತಾ ಹಾಗೂ ಮೈಕಲ್​ನ ಒಂದೇ ತಂಡದಲ್ಲಿ ಇಟ್ಟರು. ಇದು ಇಂಬ್ಯಾಲೆನ್ಸ್ ಆಗುತ್ತದೆ ಎಂದು ಸಂಗೀತಾ ಹೇಳಿದರೂ ಆ ಮಾತನ್ನು ಸ್ನೇಹಿತ್ ಕೇಳಲೇ ಇಲ್ಲ.‘ನನಗೆ ಅಧಿಕಾರ ಇದೆ’ ಎಂದು ಹಕ್ಕು ಚಲಾಯಿಸಿದರು.

ಗೇಮ್ ಆಡುವ ಸಂದರ್ಭದಲ್ಲೂ ಸಂಗೀತಾ ವಿರುದ್ಧವೇ ಅವರು ಆದೇಶ ನೀಡುತ್ತಿದ್ದರು. ಇದು ಸಂಗೀತಾಗೆ ಬೇಸರ ಮೂಡಿಸಿದೆ. ‘ನೀವು ಪಕ್ಷಪಾತ್ರ ಮಾಡುತ್ತಿದ್ದೀರಿ’ ಎಂದು ಹೇಳುತ್ತಲೇ ಇದ್ದಾರೆ ಸಂಗೀತಾ. ‘ನೀನು ಯಾರಿಗೆ ಚೇಲಾ ಅನ್ನೋದು ಗೊತ್ತಿದೆ. ಹಿಂದಿನ ವಾರ ಯಾರು ಹೋಗಬೇಕಿತ್ತು ಅನ್ನೋದು ಗೊತ್ತಿದೆ’ ಎಂದಿದ್ದಾರೆ ಸಂಗೀತಾ.

 

 

ಫ್ರೆಶ್ ನ್ಯೂಸ್

Latest Posts

Featured Videos