ಸಿಡಿಲಿಗೆ ‘ದನ,ಕರು’, ಸಜೀವದಹನ

ಸಿಡಿಲಿಗೆ ‘ದನ,ಕರು’,  ಸಜೀವದಹನ

ಚಿಕ್ಕಬಳ್ಳಾಪುರ, ಮೇ.14,ನ್ಯೂಸ್ ಎಕ್ಸ್ ಪ್ರೆಸ್ : ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಗುಡಿಸಲಿನಲ್ಲಿದ್ದ  ಸೀಮೆ ಹಸುವಿನ ಕರು ಸಜೀವದಹನವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಸಿಡಿಲು  ಬಡಿದು 3ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಗೌರಿಬಿದನೂರು ತಾಲೂಕಿನ ಕಡಬೂರು ಗ್ರಾಮದ ಬಾಲಪ್ಪ, ನರಸಮ್ಮ ದಂಪತಿಗೆ ಸೇರಿದ ಸೀಮೆಹಸುವಿನಕರು ಗುಡಿಸಲಿನ ಬೆಂಕಿಗಾಹುತಿಯಾಗಿ ಸೀಮೆ ಹಸುವಿನ ಕರು ಸುಟ್ಟು ಕರಕಲಾಗಿದೆ.ಇನ್ನುಳಿದ ಮೂರು ಸೀಮೆ ಹಸುಗಳು  ಸುಟ್ಟುಗಾಯಗಳಿಂದ ಸಾವು ಬದುಕಿನ ನಡುವೆ ನರಳಾಡುತ್ತಿವೆ.

 

ಫ್ರೆಶ್ ನ್ಯೂಸ್

Latest Posts

Featured Videos