ಬೆಂಗಳೂರು, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: ಕರ್ನಾಟಕ ರಾಜ್ಯ ಪ್ರಧಾನಿ ನರೇಂದ್ರ ಮೋದಿಗೆ ಫೇವರೇಟ್ ಆಗಿದೆ. 25 ಸ್ಥಾನ ನೀಡಿದ ಕರ್ನಾಟಕಕ್ಕೆ ಮೋದಿ ಬಂಪರ್ ಗಿಫ್ಟ್ ಕೊಡಲು ತಯಾರಿ ನಡೆಸಿದ್ದಾರೆಎಂದು ಮೂಲ ತಿಳಿಸಿವೆ. 1, 2, ಈ ಬಾರಿ 4 ರಿಂದ 5 ಸಚಿವ ಸ್ಥಾನ ಕರ್ನಾಟಕ್ಕೆ ಸಿಗುವ ಸಾಧ್ಯತೆಗಳಿವೆ. ಜಾತಿ ಸಮೀಕರಣದಲ್ಲಿ ಸಚಿವ ಸ್ಥಾನ ಹಂಚಿಕೆಯಾಗಲಿದ್ದು, ಹಾಲಿ ಸಚಿವರಿಗೆ ಕೊಕ್, ಹೊಸಬರಿಗೆ ಅವಕಾಶ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಸಚಿವಸ್ಥಾನ ರೇಸ್ನಲ್ಲಿ ಯಾರಿದ್ದಾರೆ?
ಲಿಂಗಾಯತ ಸುರೇಶ್ ಅಂಗಡಿ, ಜಿ.ಎಸ್.ಬಸವರಾಜು, ಒಕ್ಕಲಿಗ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ದಲಿತ ಉಮೇಶ್ ಜಾಧವ್, ಶ್ರೀನಿವಾಸ್ ಪ್ರಸಾದ್, ಹಿಂದುಳಿದ ವರ್ಗ ಕೋಟಾ- ನಳಿನ್ ಕುಮಾರ್ ಕಟೀಲ್, ಪಿ.ಸಿ.ಮೋಹನ್, ಬ್ರಾಹ್ಮಣ ಕೋಟಾ- ಪ್ರಹ್ಲಾದ್ ಜೋಷಿ, ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೆ ಸಚಿವ ಸ್ಥಾನ ನೀಡ್ಬೇಕು ಅನ್ನೋದರ ಕುರಿತು ಬಿಜೆಪಿಯಲ್ಲಿ ಚರ್ಚೆ ಜೋರಾಗಿದೆ. ಮೋದಿ ಕರ್ನಾಟಕಕ್ಕೆ 5 ಸಚಿವ ಸ್ಥಾನ ಕೊಡ್ತಾರಾ? ಎಂಬುದನ್ನು ಕಾದು ನೋಡಬೇಕು.