ಲಖನೌ, ಜೂನ್.5, ನ್ಯೂಸ್ ಎಕ್ಸ್ ಪ್ರೆಸ್ : ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರಿಗೆ ಸಂತ ಪದವಿ ನೀಡಲು ಸ್ಥಳೀಯ ಸಂಘಟನೆಗಳ ಸದಸ್ಯರು ನಿರ್ಧರಿಸಿದ್ದಾರೆ. ವಾರಾಣಸಿ (ಕಾಶಿ)ಯಲ್ಲಿರುವ ಕಾಶಿ ವಿದ್ವತ್ ಪರಿಷತ್ನ 24 ಸದಸ್ಯರ ಪೈಕಿ ಕೆಲ ಸದಸ್ಯರು ಕೈಗೊಂಡಿರುವ ಈ ನಿರ್ಧಾರ ವಿರೋಧಕ್ಕೂ ಕಾರಣವಾಗಿದೆ. ಕಾಶಿಯಲ್ಲಿರುವ ವಿದ್ವತ್ ಪರಿಷತ್ 4 ರೀತಿಯ ಪದವಿಗಳನ್ನು ನೀಡುತ್ತದೆ. ಅವುಗಳೆಂದರೆ ರಾಷ್ಟ್ರ ಋುಷಿ, ಮಹರ್ಷಿ ಬ್ರಹ್ಮರ್ಷಿ ಮತ್ತು ದೇವಶ್ರೀ. ಈ ಪೈಕಿ ಮೋದಿ ಅವರಿಗೆ ರಾಷ್ಟ್ರ ಋುಷಿ ಅಥವಾ ರಾಜಶ್ರೀ ಪದವಿ ನೀಡುವ ಬಗ್ಗೆ ಸಂಘಟನೆಯ ಕೆಲ ಸದಸ್ಯರು ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಕೇವಲ ಇಬ್ಬರು ವ್ಯಕ್ತಿಗಳು ಸಭೆ ಸೇರಿ ಮೋದಿ ಅವರಿಗೆ ಸಂತ ಪದವಿ ನೀಡುವ ನಿರ್ಣಯ ಕೈಗೊಂಡಿದ್ದಾರೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ. 1990ರಲ್ಲಿ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ಬ್ರಹ್ಮಶ್ರೀ ಪದವಿ ನೀಡಲಾಗಿತ್ತು. ಆದರೆ ಅವರು ಮಂಡಲ್ ಆಯೋಗದ ಶಿಫಾರಸುಗಳನ್ನು ಅಂಗೀಕರಿಸುತ್ತಲೇ ಪದವಿ ಹಿಂಪಡೆಯಲಾಗಿತ್ತು.