ಲಾರಿ-ಬಸ್ಸ್ ಮುಖಾಮುಖಿ, ಓರ್ವ ಸಾವು

ಲಾರಿ-ಬಸ್ಸ್ ಮುಖಾಮುಖಿ, ಓರ್ವ ಸಾವು

ತುಮಕೂರು, ಡಿ. 28: ಬೆಂಗಳೂರಿನಿಂದ ಬಿಜಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ದಾರಿ ಮಧ್ಯೆ ಮೂತ್ರ ವಿಸರ್ಜನೆ ಮಾಡಲು ಬಸ್ಸನ್ನು ನಿಲ್ಲಿಸುವಂತೆ ಹಠಕ್ಕೆ ಬಿದ್ದಿದ್ದ.

ಇದು ಅಪಘಾತ ವಲಯ, ಮುಂದೆ ಬಸ್ ನಿಲ್ಲಿಸುವುದಾಗಿ ಹೇಳಿದ್ದಾನೆ. ಆದರೆ, ಪ್ರಯಾಣಿಕರು ಹಠ ಮಾಡಿದ್ದರಿಂದ ಮಾರಂಗೆರೆ ಸೇತುವೆ ಬಳಿ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಹಳ್ಳಕ್ಕೆ ಉರುಳಿ ಬಿದ್ದಿದೆ.

ಪರಿಣಾಮ   ವ್ಯಕ್ತಿಯೊರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos