ಬೆಂಗಳೂರು : 18. ಆ : ಶನಿವಾರ ಮುಂಜಾನೆ 3.30 ರ ಸುಮಾರಿಗೆ ಬೆಂಗಳೂರಿನ ಡಿಜೆ ಹಳ್ಳಿಯ ಪೀಠೋಪಕರಣ ಉತ್ಪಾದನಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 25 ವರ್ಷದ ಯುವಕನೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ್ದರೆ. ನಾಲ್ವರು ಗಾಯಗೊಂಡಿದ್ದಾರೆ. ಬೆಂಕಿ ಕಾಣಿಸಿಕೊಂಡಾಗ ಕಾರ್ಮಿಕರು ನಿದ್ದೆ ಮಾಡುತ್ತಿದ್ದರು. ಕಾರ್ಖಾನೆಯ ಮಾಲೀಕ ಮನ್ಸೂರ್ ಖಾನ್ ಅವರನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದು,ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದೆ.
ಮೃತ ಯುವಕ ಉತ್ತರ ಪ್ರದೇಶ ಮೂಲದ ಮುಲ್ಲಾರ್ ಎನ್ನಲಾಗಿದ್ದು ಗಾಯಾಳುಗಳು ಗುಲ್ಮಾರ್, ನಜೀರ್, ಮುನೀರ್ ಮತ್ತು ಮುಜ್ಬೈರ್ ಎಂದು ಗುರುತಿಸಲಾಗಿದೆ.ಮುಲ್ಲಾರ್ ತಾನು ಬೆಂಕಿಯಿಂದ ಪಾರಾಗುವ ಸಲುವಾಗಿ ಶೌಚಾಲಯಕ್ಕೆ ಓಡಿದರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.ಉಳಿದ ಕಾರ್ಮಿಕರನ್ನು ನೆರೆಹೊರೆಯ ಸಾರ್ವಜನಿಕರು ರಕ್ಷಿಸಿದ್ದಾರೆ.