ಬಾಲ್​ ಕ್ಯಾಚ್​ ಹಿಡಿಯಲು ಬಂದವರು ಆಸ್ಪತ್ರೆಗೆ.!

ಬಾಲ್​ ಕ್ಯಾಚ್​ ಹಿಡಿಯಲು ಬಂದವರು ಆಸ್ಪತ್ರೆಗೆ.!

ಕೋಲಾರ ಡಿ. 25: ಕ್ರಿಕೆಟ್​ ಆಡುವ ವೇಳೆ ಆಟಗಾರರಿಬ್ಬರು ಪರಸ್ಪರ ಡಿಕ್ಕಿ ಹೊಡೆದುಕೊಂಡು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ.

ತಾಲೂಕಿನ ಸೋಮಯಾಜನಪಲ್ಲಿ ಗ್ರಾಮದ ಬಳಿ ಧೋನಿ ಪ್ರೀಮಿಯರ್​ ಲೀಗ್​ ಎರಡು ದಿನದ ಕ್ರಿಕೆಟ್​ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಅದರಲ್ಲಿ ರೈಸಿಂಗ್ ಸ್ಟಾರ್ಸ್​ ಮತ್ತು ಎಸ್‌ಎಎಸ್ ಕ್ರಿಕೆಟರ್ಸ್​ ನಡುವೆ ಟೆನ್ನಿಸ್​ ಬಾಲ್​ ಮ್ಯಾಚ್​ ನಡೆಯುತ್ತಿದ್ದು ಎಸ್‌ಎಎಸ್ ಕ್ರಿಕೆಟರ್ಸ್​ ಬ್ಯಾಟಿಂಗ್ ಮಾಡುತ್ತಿತ್ತು. ಬ್ಯಾಟ್ಸ್​ಮನ್​ ಹೊಡೆದ ಶಾಟ್​ಗೆ ರೈಸಿಂಗ್​ ಸ್ಟಾರ್ಸ್​ನ ಇಬ್ಬರು ಆಟಗಾರರಾದ ಬಾಲು ಮತ್ತು ಶ್ರೀನಿವಾಸ್​ ಎಂಬುವರು ಇಬ್ಬರೂ ಬಾಲ್​ನ್ನು ಕ್ಯಾಚ್​ ಹಿಡಿಯಲು ಹೋದಾಗ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಇವರಿಬ್ಬರನ್ನೂ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos