ರಿಯಾದ್, ಅ. 30 : ‘ನಾನು ಯಾವುದೇ ರಾಜಕೀಯ ಹಿನ್ನೆಲೆಯಿರುವ ಕುಟುಂಬದಿಂದ ಬಂದವನಲ್ಲ. ರೈಲ್ವೆ ಸ್ಟೇಷನ್ನಲ್ಲಿ ಟೀ ಮಾರಿ ಜೀವ ಸಾಗಿಸುತ್ತಿದ್ದೆ. ಬಡತನ ಎಂದರೇನು? ಎಂಬುದನ್ನು ಅನುಭವಿಸಿ ತಿಳಿದಿದ್ದೇನೆ. ಬಡತನ ಹೇಗಿರುತ್ತದೆ ಎಂಬ ಬಗ್ಗೆ ನಾನು ಪುಸ್ತಕ ಓದಿ ತಿಳಿದಿಲ್ಲ, ನನ್ನ ಜೀವನದ ಅನುಭವಗಳೇ ನನಗೆ ಬಡತನದ ಪಾಠಗಳನ್ನು ಕಲಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸೌದಿಯ ರಿಯಾದ್ ನಗರದಲ್ಲಿ ನಡೆಯಲಿರುವ 3ನೇ ಫ್ಯೂಚರ್ ಇನ್ವೆಸ್ಟ್ಮೆಂಟ್ ಇನಿಷಿಯೇಟಿವ್ ಫೋರಮ್ನ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳಲು ಸೌದಿ ರಾಜರ ಆಹ್ವಾನದ ಮೇರೆಗೆ ಮೋದಿ ಕೊಲ್ಲಿ ರಾಷ್ಟ್ರಕ್ಕೆ ಭೇಟಿ ನೀಡಿ, ಪ್ರಧಾನಿಯಾಗುವ ಮೊದಲು ಯಾವೆಲ್ಲ ರೀತಿಯ ಕಷ್ಟಗಳನ್ನು ಅನುಭವಿಸಿದೆ ಎಂಬ ಜೀವನ ಪಯಣವನ್ನು ಹಂಚಿಕೊಂಡಿದ್ದಾರೆ.
ಬಡತನಮುಕ್ತವಾಗಲಿದೆ. ಬಡತನ ನಿರ್ಮೂಲನೆಯತ್ತ ನನ್ನ ಮೊದಲ ಹೆಜ್ಜೆಯೆಂದರೆ ಬಡವರನ್ನು ಸಬಲರನ್ನಾಗಿ ಮಾಡುವುದು. ಬಡವರಿಗೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗಬೇಕು. ಒಬ್ಬ ಬಡವನಿಗೆ ತಾನೀಗ ಬಡವನಲ್ಲ ಎಂದು ಅನಿಸಿದರೆ ಅದಕ್ಕಿಂತ ದೊಡ್ಡ ಆತ್ಮತೃಪ್ತಿ ಮತ್ತೊಂದಿಲ್ಲ. ದೇಶದಲ್ಲಿ ಶೌಚಾಲಯಗಳನ್ನು ಕಟ್ಟುವ, ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಬಡವರನ್ನು ಸಬಲರನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ಮೋದಿ ಅವರಿಗೆ ಇದು ಸೌದಿ ಅರೇಬಿಯಾಗೆ ನೀಡಿರುವ 4ನೇ ಭೇಟಿಯಾಗಿದೆ.