ಆನೇಕಲ್, ಆ. 23: ತಮಿಳುನಾಡು ಕರ್ನಾಟಕ ಗಡಿಯಲ್ಲಿ 8 ಜನರನ್ನು ಬಲಿ ಪಡೆದ ಆನೆಗಳ ಕಾರ್ಯಚರಣೆಗಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ. ತಮಿಳುನಾಡಿನ ಹೊಸೂರು ಬಳಿ ಪೇರಂಡಪಲ್ಲಿ ಯಲ್ಲಿ ಬೀಡುಬಿಟ್ಟಿರುವ ಎರಡು ಕಾಡನೆಗಳು. ಕಿಲ್ಲರ್ ಆನೆಗಳನ್ನು ಹಿಡಿಯಲು ಬಂದಿರುವ ಎರಡು ಸಾಕು ಆನೆಗಳು. ಬನ್ನೇರುಘಟ್ಟ ಜೈವಿಕ ಉದ್ಯಾನವನದ ನುರಿತ ವೈದ್ಯರು ಹಾಗು ತಮಿಳುನಾಡಿನ ಮೂವರು ವೈದ್ಯರಿಂದ ಎರಡು ಆನೆಗಳಿಗೆ ಅರಿವಳಿಕೆ ಮದ್ದು ನೀಡಲು ಸಿದ್ಧತೆ. ನೂರು ಅರಣ್ಯ ಸಿಬ್ಬಂದಿಯಿಂದ ಆನೆಯನ್ನು ಹಿಡಿಯುವ ಕಾರ್ಯಚರಣೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಆನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭ.