ಹೊಸಕೋಟೆ: ಪಟ್ಟಣದ ಕೋಟೆಯ ಗಂಗಮ್ಮ ದೇವಾಲಯದ ಮುಂದೆ ಬೆಳಗ್ಗೆ ಸಮಯದಲ್ಲಿ ಮರವೂಂದು ಉರಳಿಬಿದ್ದಿದ್ದು. 11 ಕೆ.ವಿ ವಿದ್ಯುತ್ ಕಂಬ ಮತ್ತು ಲೈನ್ ರಸ್ತೆಗೆ ಬಿದ್ದಿದೆ.
ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ.10 ಗಂಟೆ ಸಮಯವಾದರೂ ನಗರಸಭೆ ಅಥವಾ ಬೆಸ್ಕಾಂನವರು ಸ್ಥಳಕ್ಕೆ ಆಗಮಿಸಿರಲಿಲ್ಲ. ಇದರಿಂದ ಸೂಲಿಬೆಲೆ ಕಡೆ ಹೋಗುವ ಬಿಎಂಟಿಸಿ ಬಸ್ಸುಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗಿದ್ದು ಸುತ್ತಿಕೊಂಡು ಹೊಗುತ್ತಿದ್ದ ಸಾರ್ವಜನಕರು ಮತ್ತು ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು.