ಚಿಕ್ಕಬಳ್ಳಾಪುರ, ಸೆ. 24 : ಉಪ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.15 ಲಕ್ಷ ರೂ. ನಗದನ್ನು ಚುನಾವಣಾ ಅಧಿಕಾರಿಗಳು ವಶ ಪಡಿಸಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಗರದ ಹೊರ ವಲಯದ ಕಣಿವೆ ನಾರಾಯಣಪುರ ಸಮೀಪದ ಸುಲ್ತಾನ್ಪೇಟೆಯಲ್ಲಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ವೇಳೆ ಈ ನಗದು ವಶಪಡಿಸಲಾಗಿದೆ. ದಾಖಲೆ ಇಲ್ಲದೇ ಬೆಂಗಳೂರಿನ ಯಲಹಂಕ ನಿವಾಸಿ ನದೀಮ್ ಎಂಬುವರು ಕಾರಿನಲ್ಲಿ ಇಟ್ಟಿದ್ದ 2.15 ಲಕ್ಷ ರೂಗಳನ್ನು ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.