ಬೆಂಗಳೂರು, ನ. 13: ಐಪಿಎಲ್ ನ ಬಹು ಜನಪ್ರಿಯ ತಂಡಗಳಲ್ಲಿ ಮೊದಲನೆಯದಾದ ,ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಆಗಿದೆ. ಸದ್ಯ ಚೆನ್ನೈ,ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಮುಂದಾಗಿದೆ.
ಆಂಗ್ಲ ಪತ್ರಿಕೆಯೊಂದರ ವರದಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಮುಖ ಮೂವರು ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧಾರ ಮಾಡಿದೆಯಂತೆ. ಅಂಬಾಟಿ ರಾಯುಡು, ಕೇದರ್ ಜಾಧವ್ ಹಾಗೂ ಮುರಳಿ ವಿಜಯ್ ರನ್ನು ತಂಡದಿಂದ ರಲೀಸ್ ಮಾಡಲಾಗುವುದು ಎಂದು ಆ ವರಧಿಯಲ್ಲಿ ತಿಳಿದು ಬಂದಿದೆ.