ನವದೆಹಲಿ, ಅ. 23 : ಗ್ರಾಹಕನೊಬ್ಬ ಬೇಕರಿ ಉದ್ಯೋಗಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ನಿವಾಸಿ ಖಲೀಲ್ ಅಹ್ಮದ್ (45) ಕೊಲೆಯಾದ ಬೇಕರಿ ಉದ್ಯೋಗಿ. ಫೈಝನ್ ಖಾನ್ (24) ಕೊಲೆಗೈದ ಗ್ರಾಹಕ. ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ ಎಂದಿದ್ದಕ್ಕೆ ಈಶಾನ್ಯ ದೆಹಲಿಯ ದಯಾಲ್ಪುರ್ ಪ್ರದೇಶದ ಬೇಕರಿಯಲ್ಲಿ ಅಕ್ಟೋಬರ್ 15ರಂದು ಘಟನೆ ನಡೆದಿದೆ. ದಯಾಲ್ಪುರ್ ಪ್ರದೇಶದ ಬೇಕರಿಗೆ ಫೈಝನ್ ಖಾನ್ ಬಂದಿದ್ದ. ಸ್ವೀಟ್ ಖರೀದಿಸಿದ್ದ ಫೈಝನ್ ಖಾನ್ ಪ್ಲಾಸ್ಟಿಕ್ ಬ್ಯಾಗ್ ಕೊಡುವಂತೆ ಕೇಳಿದ್ದಾನೆ. ಆದರೆ ಖಲೀಲ್ ಅಹ್ಮದ್ ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ ಎಂದು ಹೇಳಿದ್ದಾನೆ. ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಫೈಝನ್ ಖಾನ್ ಬೇಕರಿ ಮುಂದೆ ಇದ್ದ ಇಟ್ಟಿಗೆಯಿಂದ ಖಲೀಲ್ ಅಹ್ಮದ್ ತಲೆಗೆ ಬಲವಾಗಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ.