ತೇಜಸ್ವಿಗೆ ಟಿಕೆಟ್ ನೀಡಿದ್ದು ಯಾಕೆಂದು ಹೇಳುವವರೆಗೆ ಪ್ರಚಾರ ಮಾಡಲ್ಲ: ಬಿಜೆಪಿ ಶಾಸಕ ಸೋಮಣ್ಣ

ತೇಜಸ್ವಿಗೆ ಟಿಕೆಟ್ ನೀಡಿದ್ದು ಯಾಕೆಂದು ಹೇಳುವವರೆಗೆ ಪ್ರಚಾರ ಮಾಡಲ್ಲ: ಬಿಜೆಪಿ ಶಾಸಕ ಸೋಮಣ್ಣ

ಬೆಂಗಳೂರು, ಮಾ.27, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಿರುವ ಕುರಿತಂತೆ ಬಿಜೆಪಿಯೊಳಗೆ ಅಸಮಾಧಾನ ಮುಂದುವರಿದಿದ್ದು, ತೇಜಸ್ವಿಗೆ ಟಿಕೆಟ್ ನೀಡಿದ್ದು ಹೇಗೆ ಎನ್ನುವುದು ತಿಳಿಯುವವರೆಗೆ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ಶಾಸಕ ವಿ. ಸೋಮಣ್ಣ ಹೇಳಿದ್ದಾರೆ.

ಅನಂತ್ ಕುಮಾರ್ ರ ಪತ್ನಿ ತೇಜಸ್ವಿನಿಯವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಬೆಳವಣಿಗೆ ದುರದೃಷ್ಟಕರ. ತೇಜಸ್ವಿನಿಯವರಿಗೆ ಟಿಕೆಟ್ ಕೈತಪ್ಪಿದ್ದು ಹೇಗೆ ಎನ್ನುವ ಬಗ್ಗೆ ವಿವರಿಸಿದ ನಂತರವಷ್ಟೇ ತೇಜಸ್ವಿ ಪರ ಪ್ರಚಾರ ಮಾಡುತ್ತೇನೆ ಎಂದವರು ಹೇಳಿದರು.

ಈ ಬೆಳವಣಿಗೆಯಲ್ಲಿ ಬಸವನಗುಡಿ ಶಾಸಕ ಎಲ್.ಎ. ರವಿಯವರ ಕೈವಾಡವಿದೆ ಎಂದು ಆರೋಪಿಸಿದ ಅವರು, ಅವರ ಒಪ್ಪ ಸಂಬಂಧಿ ಕಾರ್ಪೊರೇಟರ್ ಆಗಿದ್ದು, ಇದೀಗ ಅವರ ಸಂಬಂಧಿಗೆ ಟಿಕೆಟ್ ಸಿಕ್ಕಿದೆ. ಇದು ಯಾಕೆ ನಡೆಯಿತು ಎನ್ನುವ ಬಗ್ಗೆ ನಮಗೆ ಸ್ಪಷ್ಟತೆ ಬೇಕಾಗಿದೆ ಎಂದವರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos