ಲಕ್ನೋ, ಮಾ.13, ನ್ಯೂಸ್ ಎಕ್ಸ್ ಪ್ರೆಸ್: ಆದಾಯ ತೆರಿಗೆ ವಿಭಾಗದ ದಿಲ್ಲಿ ಘಟಕದ ಅಧಿಕಾರಿಗಳು ಮಂಗಳವಾರ ದಿಲ್ಲಿ ಹಾಗೂ ಲಕ್ನೋದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ನೇತ್ರಂ ಅವರ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇವರು ಪ್ರಧಾನ ಕಾರ್ಯದರ್ಶಿಯಾಗಿದ್ದು, 90 ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣದ ಸಂಬಂಧ ಈ ದಾಳಿ ನಡೆದಿದೆ.
90 ಕೋಟಿ ರೂ.ಗೂ ಅಧಿಕ ಮೌಲ್ಯದ ಪುಸ್ತಕ ದಾಖಲಾತಿಗಳು ಸಂಶಯಾಸ್ಪದವಾಗಿದ್ದು, ಇದು ನಗದು ವಹಿವಾಟಿಗೆ ಸಂಬಂಧಿಸಿದವು. ಈ ಬೋಗಸ್ ದಾಖಲೆಯ ಮೂಲಕ ತೆರಿಗೆ ತಪ್ಪಿಸಲಾಗಿದೆ ಎನ್ನುವುದು ತನಿಖಾಧಿಕಾರಿಗಳ ಆರೋಪ. ಭಾಗಶಃ ಸಂಶಯಾಸ್ಪದ ನಗದು ವಹಿವಾಟು, ನೋಟು ರದ್ದತಿ ಅವಧಿಯಲ್ಲಿ ಆಗಿದೆ ಎಂದು ಉನ್ನತ ಮೂಲಗಳು ಹೇಳಿವೆ.