ದೇವದುರ್ಗ: ಅಪ್ರಾಪ್ತೆಯ ಅತ್ಯಾಚಾರಗಳನ್ನು ತಡೆಯಲು ವಿಫಲವಾದ ಕೇಂದ್ರ ಸರ್ಕಾರ ವಿರುದ್ಧ ದೇವದುರ್ಗದಲ್ಲಿ ಭೀಮ್ ಆರ್ಮಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ((ಪ್ರೊ.ಬಿ.ಕೃಷ್ಣಪ್ಪ) ಸ್ಥಾಪಿತ, ಎಸ್.ಡಿ.ಪಿ.ಐ. ಪಿ.ಎಫ್.ಐ. ದೇವದುರ್ಗ ತಾಲ್ಲೂಕು ಘಟಕಗಳಿಂದ ಪ್ರತಿಭಟನೆ ಮಾಡಿ ಬರೆದಿರುವ ಮನವಿಯನ್ನು
ಮಾನ್ಯ ತಹಶೀಲ್ದಾರ ಶ್ರೀನಿವಾಸ ಚಾಪೆಲ್ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರ ಕೂಡಲೇ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರಿ ಮಾಡಬೇಕು, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಸ್ಲಾಂ ಧರ್ಮಗುರು ಮುಫ್ತಿ ಮೈಬೂಬ್ ಸಾಬ್, ಕೆಡಿಎಸ್ಎಸ್ ರಾಜ್ಯ ಸಂಚಾಲಕ ಹೈದರ್ ಅಲಿ ಪಲಕನಮರಡಿ, ರಮೇಶ್ ರಾಮನಾಳ, ಕೆಡಿಎಸ್ಎಸ್ ಜಿಲ್ಲಾ ಸಂಚಾಲಕ ಬೂದೆಪ್ಪ ಕ್ಯಾದಿಗಿ ಬೂದಿನಾಳ, ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್ ಬಲ್ಲಿದ್, ಮೋಹನ್ ಬಲ್ಲಿದ್, ರಹಿಮಾನ್ ಬುವಾಜಿ, ಶಬ್ಬೀರ್ ಬುವಾಜಿ, ಜಾವೀದ್ ಖುರೈಸಿ, ಇನ್ನಿತರರಿದ್ದರು.