ಚಿಂಚೋಳಿ :ಕಲಬುರಗಿ ನಗರದ ಸಾಥ್ ಗುಂಬಜ್ ಹತ್ತಿರ ಕಾಂಗ್ರೆಸ್ ಮುಖಂಡ ಶಾಸಕಿ ಖಾನೀಜಾ ಫಾತಿಮಾ ಅಳಿಯ ಆದಿಲ್ ಸುಲೇಮಾನ್ ಮೇಲೆ ಪೊಲೀಸ್ ಕಮಿಷನರ್ ವೈ. ಎಸ್. ರವಿಕುಮಾರ್ ಮನೋಸೋ ಇಚ್ಛೆ ಹಲ್ಲೆ ಮಾಡಿರುವುದು ಖಂಡನೀಯ.
ಪೊಲೀಸರು ಬಿಜೆಪಿಯವರ ಕೈಗೊಂಬೆಗಳಂತೆ ವರ್ತಿಸಿರುವುದು ಹಾಡು ಹಗಲೇ ಕಗ್ಗೊಲೆ ನಡೆಯುತ್ತಿರುವುದು ನಿದರ್ಶನವಾಗಿದೆ. ಕಾನೂನು ಬಾಹಿರ ಧೋರಣೆಗಳನ್ನು ಇಂತಹ ಘಟನೆಗಳನ್ನು ಮರುಕಲಿಸದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ವಿರೋಧ ಎದುರಿಸಬೇಕಾಗುತ್ತದೆ. ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಮಲಿ ಹೇಳಿದರು.