ಆರೋಗ್ಯ ತಪಾಸಣೆಗೆಂದು ಅಮೇರಿಕಕ್ಕೆ ತೆರಳಿದ್ದ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಜುಲೈ ೮ ಭಾರತಕ್ಕೆ ವಾಪಾಸಾಗಲಿದ್ದಾರೆ.
ಮೂತ್ರಪಿಂಡ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ತಲೈವಾ ವಿಶೇಷ ವಿಮಾನದಲ್ಲಿ ಇಂದು ಚೆನ್ನೈಗೆ ಆಗಮಿಸುತ್ತಾರೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ರಜನಿಕಾಂತ್ ಆರೋಗ್ಯ ತಪಾಸಣೆಗೆಂದು ಅಮೆರಿಕಾಗೆ ತೆರಳಿದ್ದರು. ಅಲ್ಲಿ ಧೀರ್ಘಕಾಲದ ತಪಾಸಣೆ ಮತ್ತು ವಿಶ್ರಾಂತಿ ಬಳಿಕ ಅವರು ಭಾರತಕ್ಕೆ ಬರುತ್ತಿದ್ದಾರೆ.
ರಜನಿಕಾಂತ್ ಜೂನ್ ೧೯ ರಂದು ಅಮೆರಿಕಕ್ಕೆ ಹೋಗಿದ್ದರು. ವಿದೇಶಕ್ಕೆ ಹೊರಟಿದ್ದ ರಜನಿಕಾಂತ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ತನ್ನ ಪತ್ನಿ ಲತಾ ಜೊತೆ ಕಾಣಿಸಿಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್ನ ಕೆಲವು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅನುಮಾನ ವ್ಯಕ್ತಪಡಿಸಿದ ನಟಿ
ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಭಾರತೀಯರಿಗೆ ನೇರವಾಗಿ ಅಮೆರಿಕಕ್ಕೆ ತೆರಳಲು ಅವಕಾಶವಿರಲಿಲ್ಲ. ಹೀಗಿದ್ದರೂ ನಟ ರಜನಿಕಾಂತ್ ಭಾರತ ಸರ್ಕಾರದಿಂದ ಅನುಮತಿ ಪಡೆದು ಅಮೆರಿಕಕ್ಕೆ ಹಾರಿದ್ದರು.
ಭಾರತದ ಪ್ರಜೆಗಳು ಅಮೆರಿಕಕ್ಕೆ ನೇರವಾಗಿ ಎಂಟ್ರಿ ಪಡೆಯುವುದರ ಮೇಲೆ ಅಲ್ಲಿನ ದೇಶ ನಿರ್ಬಂಧ ಹೇರಿದೆ. ಆದರೆ, ವೈದ್ಯಕೀಯ ಸಮಸ್ಯೆ ಆದರೆ ಮಾತ್ರ ವಿನಾಯತಿ ಇದೆ.
ಈ ಸಂದರ್ಭದಲ್ಲಿ ರಜನಿಕಾಂತ್ ಏಕೆ ಮತ್ತು ಹೇಗೆ ಅಮೆರಿಕಕ್ಕೆ ತೆರಳಿದರು. ಅವರು ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿದಿದ್ದರು. ಈಗ ಅವರು ಅಮೆರಿಕಕ್ಕೆ ತೆರಳಿದ ವಿಚಾರ ಅನುಮಾನ ಹುಟ್ಟು ಹಾಕಿದೆ. ರಜನಿ ಸರ್ ದಯವಿಟ್ಟು ಇದನ್ನು ಸ್ಪಷ್ಟಪಡಿಸಿ ಎಂದು ಕಸ್ತೂರಿ ಕೇಳಿದ್ದಾರೆ.