ದೇವನಹಳ್ಳಿ: ಗರ್ಭಾವಸ್ಥೆ ಹಾಗೂ ತಾಯ್ತನ ಎರಡೂ ಸುರಕ್ಷಿತವಾಗಿ ಹಾಗೂ ಉಚಿತ ಸೌಲಭ್ಯ ಪಡೆಯಲು ಸೂಚಿಸಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಾವಣಿ ಕಡ್ಡಾಯ ಎಂದು ಜಿಲ್ಲಾ ವೈದ್ಯಾಧಿಕಾರಿ ಮಂಜುಳಾದೇವಿ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ರೋಜ್ ಗಾರ್ ಕಚೇರಿಯಲ್ಲಿ ರಾಜ್ಯ ದಲಿತ ಮಾನವ ಹಕ್ಕುಗಳ ವೇದಿಕೆ – ಕರ್ನಾಟಕ ಹಾಗೂ ತಾಯಿ ಆರೋಗ್ಯ ಹಾಗೂ ಮಾನವ ಹಕ್ಕುಗಳ ರಾಷ್ಟ್ರೀಯ ಸಮನ್ವಯದ ವತಿಯಿಂದ ಬಾಣಂತಿಯರ ಆರೋಗ್ಯ ಹಕ್ಕುಗಳ ಕುರಿತು ಏರ್ಪಡಿಸಿದ್ದ ಜನ ಸಂವಾದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗರ್ಭಿಣಿಯರು ಮತ್ತು ಬಾಣಂತಿಯರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿಯಿರಿ. ನೀವು ಗರ್ಭಿಣಿ ಎಂದು ಧೃಡಪಡಿಸಿಕೊಳ್ಳಲು ನಮ್ಮ ಆರೋಗ್ಯ ಕೇಂದ್ರಗಳಿಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬಹುದು. ಖಚಿತ ಪಡಿಸಿಕೊಂಡ ನಂತರ ಅಂಗನವಾಡಿ ಕಾರ್ಯಕರ್ತೆಯರ ಬಳಿ ಅಥವಾ ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ ಹೀಗೆ ಎಲ್ಲಾದರೂ ಒಂದು ಕಡೆ ಉಚಿತವಾಗಿ ನೊಂದಾಯಿಸಿಕೊಳ್ಳಿ ಎಂದರು.