ಮುಧೋಳ: ತಾಲೂಕಿನಾದ್ಯಾಂತ ಭಾರೀ ಮಳೆಯಾಗುತ್ತಿದ್ದು, ತುಂಬಿ ಹರಿಯುತ್ತಿರುವ ಒಂಟಗೋಡಿ ಗ್ರಾಮದ ಹಳ್ಳ ದಾಟುವ ವೇಳೆ ಯುವಕನೊಬ್ಬ ಕೊಚ್ಚಿಹೋಗಿದ ಹೃದಯ ವಿದ್ರಾವಕ ಘಟನೆ ಶನಿವಾರ ಸಂಭವಿಸಿದೆ.
ಮೃತನನ್ನು ಕುಳಲಿ ಗ್ರಾಮದ ಯುವಕ ಸಂತೋಷ ಸುಭಾಷ ಅಡವಿ (೨೭) ಎಂದು ತಿಳಿದು ಬಂದಿದೆ. ಈತ ಬಿಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿದ್ದನು.
ಗ್ರಾಮಸ್ಥರ ಸಹಾಯದಿಂದ ಯುವಕನ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಕಾರ್ಯನಿಮಿತ್ತ ಹಳ್ಳ ದಾಟಿ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿ, ಆತನ ಜೀವವೇ ಹೋಗಿದೆ. ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನೆರೆದ ಸಾರ್ವಜನಿಕರ ಕಣ್ಣಾಲಿಗಳು ಕೂಡ ತುಂಬಿ ಬಂದಿದ್ದವು. ಲೋಕಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.