ಗೌರಿಬಿದನೂರು:ನಗರದ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಅಗಿ ಎನ್.ಚಂದ್ರಕಲಾ ನೇಮಕವಾಗಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ ಜನ ಸಾಮಾನ್ಯರ ಸಮಸ್ಯೆಗಳನ್ನು ಕಾನೂನು ರೀತ್ಯ ಪರಿಹಾರ ಮಾಡಲು ಸದಾ ಸಿದ್ದ ಯಾವುದೇ ದಲ್ಲಾಳಿಗಳ ಮೂಲಕ ಬಾರದೆ ತಮ್ಮ ಸಮಸ್ಯೆಗಳನ್ನು ಇತ್ಯರ್ಥಕ್ಕೆ ನೇರವಾಗಿ ಠಾಣೆಗೆ ಬರಬಹುದು. ದಲಿತ ಸಮಸ್ಯೆ ಕುಟುಂಬ ಸಮಸ್ಯೆ ಜಮೀನುಗಳ ಸಮಸ್ಯೆ ಇನ್ನಿತರೆ ಪ್ರಕರಣಗಳನ್ನೂ ಸೌರ್ಹಾದತೆಯಿಂದ ಇತ್ಯಾರ್ಥ ಮಾಡಿಕೊಡಲು ನಮ್ಮ ಇಲಾಖೆ ಸದಾ ಬದ್ಧ ಒಟ್ಟಾರೆ ನಗರದಲ್ಲಿ ಶಾಂತಿ ಕಾಪಾಡಲು ನಮ್ಮ ಸಿಬ್ಬಂದಿ ಹಗಲಿರಳು ಕೆಲಸ ನಿರ್ವಹಿಸಲು ಸಿದ್ದರಿದ್ದಾರೆ.
ನಗರದ ಪ್ರಥಮ ಪಿಎಸ್ಐ ಎನ್. ಚಂದ್ರಕಲಾ ನೇಮಕ ಅಗಿರುವುದು ವಿಶೇಷವಾಗಿದ್ದು ಈ ಹಿಂದೆ ಇವರು ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸಿ ನಂತರ ಕೆ.ಜಿ.ಎಫ್ ಬಂಗಾರಪೇಟೆ ಮತ್ತು ಚೇಳೂರುನಲ್ಲಿ ಕೆಲಸ ನಿರ್ವಹಿಸಿದ ಅನುಭವ ಇದೆ.