ಕೊರಟಗೆರೆ:ತಾಲ್ಲೂಕಿನ ಥರಟಿ ಗ್ರಾಮದ ಬಳಿ ಕಲ್ಲುಬಂಡೆ ಸ್ಫೋಟಿಸುವ ವೇಳೆ ಕಲ್ಲು ಸಿಡಿದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಾರ್ಖಂಡ್ ರಾಜ್ಯದ ಸಾಯಬ್ ಖಾನ್ ಜಿಲ್ಲೆಯ ಕನ್ನಯ್ಯ (೩೬) ಮೃತಪಟ್ಟವರು. ಬಾಗಲಕೋಟೆಯ ಗುರುನಾಥ, ತಮಿಳುನಾಡಿನ ರಾಜು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಥರಟಿ ಗ್ರಾಮದ ಸಮೀಪ ಜಗನ್ನಾಥಪುರ ಗ್ರಾಮದ ಸರ್ವೆ ನಂಬರ್ನಲ್ಲಿರುವ ದೇವರಬೆಟ್ಟದಲ್ಲಿ ತುಮಕೂರಿನ ಗ್ಯಾಸ್ ಬಾಬು ಎಂಬುವರ ಕಲ್ಲು ಗಣಿಗಾರಿಗೆಯಲ್ಲಿ ಸಿಡಿಮದ್ದು ಇಟ್ಟು ಕಲ್ಲು ಬಂಡೆ ಸಿಡಿಸುವಾಗ ಅವಘಡ ಸಂಭವಿಸಿದೆ. ಅತಿ ಎತ್ತರದ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವ ಕಾರಣ ಕಲ್ಲು ಪುಡಿಮಾಡಲು ಸ್ಫೋಟಕ ಬಳಸಲಾಗುತ್ತಿದೆ. ಇದರಿಂದ ಬೆಟ್ಟದ ಮೇಲಿಂದ ಕಲ್ಲುಗಳು ಸ್ಫೋಟಗೊಂಡು ಕೆಳಗೆ ಬೀಳುತ್ತವೆ.