ಬೆಂಗಳೂರ : ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಾಗಪುರ ವರ್ಡ್ ನಲ್ಲಿರುವ ಶಾಸಕರ ಕಛೇರಿಯಲ್ಲಿ ಅಂಗವಿಕಲರಿಗೆ ಉಚಿತವಾಗಿ 77 ಸ್ಕೂಟರ್ ಮತ್ತು 200 ಬಡಜನರಿಗೆ ಆಹಾರದ ಕಿಟ್ ಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಕೆ ಗೋಪಾಲಯ್ಯ ನವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಗೋಪಾಲಯ್ಯನವರು, ರ್ಥಿಕವಾಗಿ ಹಿಂದುಳಿದ ವಿಕಲಚೇತನರು ಸ್ವಂತ ವಾಹನ ಖರೀದಿ ಮಾಡಲು ಆಸಾಧ್ಯ ಅದ್ದರಿಂದ ಅವರ ಕೆಲಸ ಕರ್ಯಗಳಿಗೆ ತೆರಳಲು ಸಹಕಾರಿಯಾಗಲಿ ಎಂದು ತ್ರಿಚಕ್ರ ವಾಹನ ವಿತರಿಸಲಾಗಿದೆ. ಕೊರೋನ ವೈರಸ್ ಕೊವಿಡ್-19 ರ ಕಾರಣದಿಂದ ಬಡವರು ಹಸಿವಿನಿಂದ ಬಳಲಬಾರದು ಎಂದು ದಿನಸಿ ಸಾಮಾಗ್ರಿಗಳ ಆಹಾರ ಕಿಟ್ ವಿತರಿಸಲಾಗಿದೆ ಎಂದು ಹೇಳಿರು.