ಚೆನ್ನೈ, ಡಿ. 2 : ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಐವರು ಬಲಿಯಾಗಿದ್ದು, ಮುಂದಿನ ಎರಡು ದಿನವೂ ಮಳೆ-ಚಳಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯುಭಾರ ಕುಸಿತದ ಹಿನ್ನೆಲೆ ನೆರೆಯ ತಮಿಳುನಾಡಿನಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ಕರಾವಳಿ ಪ್ರದೇಶಗಳಲ್ಲಿ’ಆರೇಂಜ್ ಅಲರ್ಟ್’ (ಭಾರಿ ಮಳೆ ಸಾಧ್ಯತೆ) ಘೋಷಿಸಲಾಗಿದೆ. ”ವಾಯುಭಾರ ಕುಸಿತದಿಂದ ಕರಾವಳಿ ಪ್ರದೇಶಗಳಲ್ಲಿವ್ಯಾಪಕ ಮಳೆ ಬೀಳುತ್ತಿದೆ. ತಮಿಳುನಾಡಿನ ರಾಮನಾಥಪುರಂ, ಶಿವಗಂಗಾ, ತಂಜಾವೂರು, ಪುದುಕೊಟ್ಟೈ, ತಿರುವರೂರು, ನಾಗಪಟ್ಟಣಂ, ಕಡಲೂರು ಮತ್ತು ನೆರೆಯ ಪುದುಚೇರಿ, ಕರೈಕಲ್ನಲ್ಲಿಧಾರಾಕಾರ ಮಳೆ ಸುರಿಯುತ್ತಿದೆ. ಇದೇ ಸ್ಥಿತಿ ಇನ್ನೂ ಎರಡು ದಿನ ಮುಂದುವರಿಯಲಿದೆ.