ನಾಗ್ಪುರ, ನ. 13: ಭಾರತ ತಂಡಕ್ಕೆ ಏಕದಿನ ಹಾಗೂ ಟಿ20 ಮಾದರಿಯಲ್ಲಿ 4ನೇ ಕ್ರಮಾಂಕದ ಬ್ಯಾಟ್ಸ್ಮನ್ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಂತೆ ಕಾಣುತ್ತಿದೆ. ಐಪಿಎಲ್ ಹಾಗೂ ರಣಜಿಯಲ್ಲಿ ತಮ್ಮ ಆಕರ್ಷಕ ಪ್ರದರ್ಶನದಿಂದಲೇ ಪ್ರತಿನಿಧಿಸುವಂತೆ ಮಾಡಿರುವ ಮುಂಬೈನ ,ಶ್ರೇಯಸ್ ಅಯ್ಯರ್ ತಂಡದ ಆಡಳಿತ ಹಾಗೂ ಬಿಸಿಸಿಐನ ಗಮನ ಸೆಳೆಯುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ ಶ್ರೇಯಸ್ ರ ಸ್ಪೋಟಕ ಆಟ, ಅವರ ಮೇಲೆ ಮತ್ತಷ್ಟು ನಂಬಿಕೆ ಮೂಡುವಂತೆ ಮಾಡಿದೆ.