ಬೆಂಗಳೂರು, ನ. 06: ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ.ಜಚನಿ ಸಂಸ್ಮರಣೆ ಪ್ರಯುಕ್ತ ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಇಂದು ನೆರವೇರಿಸಲಾಯಿತು. ಪ್ರಶಸ್ತಿಗೆ ಆಯ್ಕೆಯಾದ ಡಾ.ಪಂಚಾಕ್ಷರಯ್ಯ ಹಿರೇಮಠ ಹಿಂದೂಸ್ಥಾನಿ ಸಂಗೀತ, ಡಾ.ಉಷಾಕಿರಣ್ ಶಿಕ್ಷಣ, ಗಂಡಸಿ ಸದಾನಂದಸ್ವಾಮಿ ಪತ್ರಕರ್ತರು, ಅನ್ನದಾನಯ್ಯ ವಕೀಲರು ಮತ್ತು ಕನ್ನಡ ಸೇವೆಗೆ ಗುರುತಿಸಿ ಕನ್ನಡ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಹಾ ಸಂಸ್ಥಾನ, ತಿಮ್ಮಯ್ಯ, ಮಾಯಣ್ಣ ಬೆಂ,.ನಗರ ಜಿಲ್ಲಾ ಕಸಪಾ ಅಧ್ಯಕ್ಷರು ಉಪಸ್ಥಿತರಿದ್ದರು.