ಕಳ್ಳರ ಕೈಚಳಕ ನಿಯಂತ್ರಿಸಲಾಗದ ಪೋಲಿಸ್

ಕಳ್ಳರ ಕೈಚಳಕ ನಿಯಂತ್ರಿಸಲಾಗದ ಪೋಲಿಸ್

ಬೆಂಗಳೂರು, ಅ. 14: ನಗರದಲ್ಲಿ ಸರಗಳ್ಳತನ, ಮನೆಕಳ್ಳತನ, ರಾಬರಿ ಕೃತ್ಯಗಳಿಗಿಂತ ವಾಹನಗಳ ಕಳ್ಳತನ ಹೆಚ್ಚು ತಲೆನೋವಾಗಿ ಪರಿಣಮಿಸಿದೆ.

ನಗರದಲ್ಲಿ ದಿನನಿತ್ಯ ಕನಿಷ್ಠ 12 ರಿಂದ 13 ವಾಹನಗಳನ್ನು ಕಳ್ಳರು ಎಗರಿಸುತ್ತಿದ್ದಾರೆ. ಇದರಲ್ಲಿ ಶೇ.90 ರಷ್ಟು ಬೈಕ್ ಕಳವು ಪ್ರಕರಣಗಳೇ ಇವೆ ಎಂಬುದು ಆಘಾತಕಾರಿ ಅಂಶವಾಗಿದೆ. ಬೀಟ್ ಪೊಲೀಸ್ ವ್ಯವಸ್ಥೆ, ಹೊಯ್ಸಳ ಗಸ್ತು, ಹಿರಿಯ ಅಧಿಕಾರಿಗಳ ನೈಟ್ ರೌಂಡ್ಸ್ ಇನ್ನಿತರೆ ಕ್ರಮಗಳನ್ನು ನಗರ ಪೊಲೀಸರು ವಾಹನ ಕಳ್ಳರ ಕೈ ಚಳಕಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ.

ವಾಹನಗಳ ಖರೀದಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸಿಲಿಕಾನ್ ಸಿಟಿ ಖ್ಯಾತಿಯ ವಾಹನಗಳ ಕಳವಿನಲ್ಲೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದ ವಾಹನ ಕಳವು ಗ್ಯಾಂಗ್‌ಗಳು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಆಗ್ನೇಯ ವಿಭಾಗ, ಪಶ್ಚಿಮ ವಿಭಾಗ, ಉತ್ತರ ವಿಭಾಗಗಗಳೇ ಪ್ರಮುಖ ಟಾರ್ಗೆಟ್.

ಹಗಲು ಹಾಗೂ ರಾತ್ರಿ ವೇಳೆ ನಿರಾಂತಕವಾಗಿ ಬೈಕ್‌ಗಳನ್ನು ಕದಿಯುವ ಈ ಗ್ಯಾಂಗ್‌ಗಳು, ಸದ್ದಿಲ್ಲದೆ ಸಾಗಿಸುತ್ತವೆ. ಒಮ್ಮೆ ಕಳ್ಳತನಕ್ಕೆ ಇಳಿದರೆ ಕನಿಷ್ಠ 20 ರಿಂದ 30 ಬೈಕ್‌ಗಳನ್ನು ಕಳವು ಮಾಡಿ ಎಸ್ಕೇಪ್ ಆಗುತ್ತವೆ.

ವಾಹನ ಕಳವು ಪ್ರಕರಣಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿಬಿಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ನಡೆದ ವಾಹನಕಳವು ಪ್ರಕರಣಗಳಲ್ಲಿ ಪತ್ತೆಯಾದ ಪ್ರಮಾಣ ಕೇವಲ ಶೇ.28.64 2012 ರಿಂದ 2019 ರ ಸೆಪ್ಟೆಂಬರ್ ಅಂತ್ಯದವರೆಗೆ ನಗರದಲ್ಲಿ ಕಳುವಾಗಿದ ವಾಹನಗಳ ಪೈಕಿ 10,589 ವಾಹನಗಳು ಪತ್ತೆಯಾಗಿಲ್ಲ. ವಾಹನಗಳು ಯಾರ ಕೈ ಸೇರಿವೆ, ಮೂಲ ಸ್ವರೂಪ ಕಳೆದುಕೊಂಡಿವೆಯೋ ದುಷ್ಕೃತ್ಯಗಳನ್ನು ಎಸಗುವ ಕಿಡಿಗೇಡಿಗಳ ಕೈಗೆ ಸಿಕ್ಕಿವೆಯೋ ಎನ್ನುವ ಸುಳಿವೇ ಪೊಲೀಸರಿಗಿಲ್ಲ. ಬೈಕ್ ಹಾಗೂ ಇತರೆ ವಾಹನಗಳ ಕಳ್ಳರ ಜಾಲ ಗುಜರಿ ಅಂಗಡಿಗಳವರೆಗೆ ವಿಸ್ತರಿಸಿಕೊಂಡಿರುತ್ತದೆ. ಒಮ್ಮೆ ಬೈಕ್‌ಗಳು ಅಲ್ಲಿಗೆ ತೆರಳಿದರೆ ಬಿಡಿಭಾಗಗಳನ್ನು ಕಳಚಿ ಮೂಲ ಸ್ವರೂಪವೇ ಇರುವುದಿಲ್ಲ. ಹೀಗಾಗಿ, ಬೈಕ್ ಮೂಲ ಸ್ವರೂಪದಲ್ಲಿ ಸಿಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೋಟ್ ಓಡಿಸುತ್ತೆ ಇಂಜಿನ್

ನಗರದಲ್ಲಿ ಬೈಕ್‌ಕಳವು ಮಾಡುವುದರಲ್ಲಿ ತಮಿಳುನಾಡಿನ ಕೊಯಮತ್ತೂರು ಹಾಗೂ ಅಂಬೂರ್ ತಂಡಗಳು ಮೊದಲ ಸ್ಥಾನದಲ್ಲಿವೆ. ಅಂಬೂರಿನ ಕೆಲ ಕುಟುಂಬಗಳು ಬೈಕ್ ಕಳ್ಳತನವೆ ಮೂಲಸುಬಾಗಿದೆ ಎನ್ನುತ್ತಾರೆ ಪೊಲೀಸರು. ಕೋರಮಂಗಲ, ಮೈಕೋ ಲೇಔಟ್, ಕೆ.ಆರ್.ಪುರ, ಲೇಔಟ್, ವೈಟ್ಫೀಲ್ಡ್ ವಿಭಾಗಗಳಲ್ಲಿ ಒಂದೆರಡು ದಿನ ಸಂಚರಿಸಿ ಹ್ಯಾಂಡಲ್ ಲಾಕ್ ಮುರಿಯುವುದು, ಇಲ್ಲವೇ ನಕಲಿ ಕೀಗಳನ್ನು ಬಳಸಿ ಬೈಕ್‌ಗಳನ್ನು ಕಳವು ಮಾಡಿಕೊಂಡು ಹೋಗುತ್ತಾರೆ. ಟೋಲ್ ಗೇಟ್‌ಳಲ್ಲಿ ಪೊಲೀಸರಿಗೆ ಸಿಕ್ಕಿಬೀಳಬಹುದು ಎಂಬ ಉದ್ದೇಶದಿಂದ ಹೆದ್ದಾರಿಗಳನ್ನು ಬಿಟ್ಟು ಅಡ್ಡದಾರಿಗಳ ಮೂಲಕ ಹೋಗುತ್ತಾರೆ.

ಗುಜರಿ ಅಂಗಡಿಗಳಿಗೆ ಬಂದ ಬೆಲೆಗೆ ಮಾರಾಟ ಮಾಡುತ್ತಾರೆ. ಗುಜರಿ ಅಂಗಡಿಯವರು ಬಿಡಿಭಾಗಗಳನ್ನು ಬಿಚ್ಚಿ ಅದರಲ್ಲಿ ಪ್ರಮುಖವಾಗಿ ಇಂಜಿನ್ ಅನ್ನು ಮೀನುಗಾರಿಕೆಗೆ ಬಳಸುವ ಬೋಟ್‌ಗಳಿಗೆ ಅಳವಡಿಸಲು ಮಾರುತ್ತಾರೆ.

ಕನ್ನಾರ್, ಪಾಲಾರ್, ಕೇರಳದ ಬ್ಯಾಪರೆ, ಕಪ್ಪಾಡ್, ಚವಾಕ್ಕಾಡ್ ಬೀಚುಗಳÀಲ್ಲಿನ ಒಳನಾಡು ಮೀನುಗಾರಿಕೆ ಬೋಟುಗಳಿಗೆ ಕದ್ದ ಬೈಕ್‌ಗಳ ಎಂಜಿನ್‌ಗಳು ಬಳಕೆಯಾಗುತ್ತವೆ ಎಂದು ಅಂಬೂರ್ ಕಳ್ಳರ ಬಂಧಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ಹೇಳುತ್ತಾರೆ.

ಗುಜರಿ ಅಂಗಡಿಗಳನ್ನು ಹೊರತುಪಡಿಸಿ ಕಡಿಮೆ ಮೊತ್ತಕ್ಕೆ ಇಡೀ ಬೈಕ್‌ಗಳನ್ನು ಮಾರಾಟ ಮಾಡುವುದೂ ಇದೆ. ತಮಿಳುನಾಡಿನ ಗ್ರಾಮೀಣ ಭಾಗಗಳು, ಕೋಲಾರ, ಶ್ರೀನಿವಾಸಪುರ, ಅನಂತಪುರ, ಚಿತ್ತೂರು ಕಡೆ ಈ ರೀತಿ ಕದ್ದ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ನಗರದ ಕೆಲವು ಬೈಕ್ ಕಳವು ಗ್ಯಾಂಗ್‌ಗಳು ಕೂಡ ಶಿವಾಜಿನಗರ, ಕೆ.ಆರ್ ಮಾರ್ಕೆಟ್ ಸೇರಿದಂತೆ ಕೆಲವು ಭಾಗಗಳಲ್ಲಿ ತಮಗೆ ಪರಿಚಯದÀ ಗುಜರಿ ಮಾಲೀಕರಿಗೆ ಮಾರಾಟ ಮಾಡುತ್ತಾರೆ ಎಂದು ಅಧಿಕಾರಿ ಹೇಳುತ್ತಾರೆ.

ಮೋಜು ಮಸ್ತಿಗಾಗಿ ಕಳವು

ನಗರದಲ್ಲಿ ಶೋಕಿಗಾಗಿಯೂ ಬೈಕ್‌ಗಳನ್ನು ಕಳವು ಮಾಡುತ್ತಾರೆ ಎಂಬುದೂ ನಿಜ. ಕೆಲವು ಯುವಕರಿಗೆ ವಿವಿಧ ಮಾದರಿಯ ಬೈಕ್‌ಗಳ ಮೇಲೆ ವಿಪರೀತ ಕ್ರೇಜ್ ಇರುತ್ತದೆ. ಅಂತಹ ಆರೋಪಿಗಳು ತಮಗೆ ಬೇಕು ಎನಿಸಿದ ರಾಯಲ್ ಎನ್ಫೀಲ್ಡ್, ಕೆಟಿಎಂ ಡ್ನೂಕ್, ಪಲ್ಸರ್ ಸೇರಿದಂತೆ ಹಲವು ಬೈಕ್‌ಗಳನ್ನು ಕದಿಯುತ್ತಾರೆ. ಆದರೆ, ಮಾರಾಟ ಮಾಡುವುದಿಲ್ಲ, ಕದ್ದ ಬೈಕ್ಗಳನ್ನು ಪೆಟ್ರೋಲ್ ಖಾಲಿ ಆಗುವವರೆಗೆ ಓಡಿಸುತ್ತಾರೆ ಬಳಿಕ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಾರೆ.

ಮತ್ತೂಂದು ವಿಚಿತ್ರ ಎಂದರೆ ಕಾರ್ತಿಕ್ ಎಂಬಾತ ತನ್ನ ಪ್ರೇಯಸಿ ಜತೆ ಸುತ್ತಾಡಲೆಂದೇ ೧೦ ಬೈಕ್‌ಗಳನ್ನು ಕಳವು ಮಾಡಿದ್ದ. ಅದೇ ಬೈಕ್‌ಗಳಲ್ಲಿ ನಂದಿಬೆಟ್ಟ, ಕೊಡಗು, ಹೊಗೇನಕಲ್ ಸೇರಿ ಇತರೆ ಪ್ರವಾಸಿ ತಾಣಗಳಿಗೆ ಸುತ್ತಾಡಿದ್ದ. ಕೋರಮಂಗಲ ಪೊಲೀಸರು ಆತನನ್ನು ಬಂಧಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿತ್ತು. ಇನ್ನೂ ಕೆಲವರು ವ್ಹೀಲಿಂಗ್ ಶೋಕಿಗಾಗಿ ಕಳವು ಮಾಡುವುದು ಕೂಡ ಹುಚ್ಚಾಗಿಬಿಟ್ಟಿದೆ ಎನ್ನುತ್ತಾರೆ ಪೊಲೀಸರು.

ಅಪರಾಧ ಕೃತ್ಯಗಳಿಗೂ ಬಳಕೆ

ನಗರದಲ್ಲಿ ಸರಗಳವು, ರಾಬರಿ ಮುಂತಾದ ಕೃತ್ಯಗಳನ್ನು ಎಸಗಲು ಬಹುತೇಕ ಪ್ರಕರಣಗಳಲ್ಲಿ ಬಳಕೆಯಾಗಿವೆ ಎಂಬುದು ಗಮನಾರ್ಹ ಸಂಗತಿ. ಸರಕಳ್ಳತನದಲ್ಲಿ ಕುಖ್ಯಾತಿ ಪಡೆದಿರುವ ಇರಾನಿ ಗ್ಯಾಂಗ್ ಸೇರಿದಂತೆ ಮತ್ತಿತರ ತಂಡಗಳು ಮೊದಲಿಗೆ ನಗರದಲ್ಲಿ ಒಂದೆರಡು ದಿನ ಉಳಿದು, ಬೈಕ್‌ಗಳನನ್ನು ಕದ್ದು, ನಂಬರ್ ಪ್ಲೇಟ್ ಬದಲಿಸಿ ಸರಗಳವು ಹಾಗೂ ರಾಬರಿ ಕೃತ್ಯಗಳನ್ನು ಎಸಗಿದ್ದಾರೆ.

ಪದವೀಧರರು ಅರೆಸ್ಟ್

ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕೂಡ ಬೈಕ್ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ದುಶ್ಚಟಗಳಿಗೆ ದಾಸರಾಗಿ, ಶೋಕಿ ಜೀವನ ನಡೆಸುವ ಸಲುವಾಗಿ ವಾಹನ ಕಳ್ಳತನದಂತಹ ಕೃತ್ಯಗಳನ್ನು ಎಸಗಿ ಜೈಲು ಸೇರಿದ ಹಲವು ಪದವೀಧರರನ್ನು ಕಂಡಿದ್ದೇನೆ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಎನ್ಫೀಲ್ಡ್ ಬಿಟ್ಟು ಬೇರೇನೂ ಮುಟ್ಟಲ್ಲ!: ರಾಯಲ್ ಕಳ್ಳರ ತಂಡವಿದೆ. ಅಂಬೂರ್‌ನ ನಿಯಾಜ್ ತಂಡ ರಾಯಲ್ ಎನ್ಫೀಲ್ಡ್, ಬುಲೆಟ್ ಳನ್ನು ಬಿಟ್ಟರೆ ಬೇರಾವ ಬೈಕ್ ಮುಟ್ಟುವುದಿಲ್ಲ.

ಜಿಪಿಎಸ್, ಅಲಾರಂ ಅಳವಡಿಸಿ

ಕಾನೂನು ಸುವ್ಯವಸ್ಥೆ, ಅಪರಾಧ ತಡೆಗಟ್ಟುವುದು ಪೊಲೀಸರ ಕರ್ತವ್ಯ ಸರಿ. ಬೈಕ್ ಹಾಗೂ ಕಾರುಗಳಿಗೂ ಕಾವಲಿರಬೇಕು ಎಂದರೆ ಹೇಗೆ ಸಾಧ್ಯ? ಈಗಾಗಲೇ ಬೀಟ್ ವ್ಯವಸ್ಥೆ ಜಾರಿಯಲ್ಲಿದೆ ಆಯಾ ಬೀಟ್ ಸಿಬ್ಬಂದಿಯೂ ಕಾರ್ಯನಿರ್ವಹಿಸುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos