ಪ್ರವಾಹದಲ್ಲಿ ಸಿಲುಕಿದ್ದ ರೈಲಿನಿಂದ ಪ್ರಯಾಣಿಕರ ರಕ್ಷಣೆ

ಪ್ರವಾಹದಲ್ಲಿ ಸಿಲುಕಿದ್ದ ರೈಲಿನಿಂದ ಪ್ರಯಾಣಿಕರ ರಕ್ಷಣೆ

ನವದೆಹಲಿ: ಪ್ರವಾಹದಲ್ಲಿ ಸಿಲುಕಿರುವ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿನಿಂದ ಶುಕ್ರವಾರ ರಾತ್ರಿಯಿಂದ ನೂರಾರು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರವಾಹದ ವೀಡಿಯೋವನ್ನು ಶೇರ್ ಮಾಡಿ ರಕ್ಷಣೆ ಮಾಡುವಂತೆ ಅಂಗಲಾಚುತ್ತಿದ್ದಾರೆ. ಮಾನ್ಸೂನ್ ಭಾರಿ ಮಳೆಯಿಂದಾಗಿ ಈಗ ಮುಂಬೈನಲ್ಲಿ ಪ್ರವಾಹದ ಭೀಕರ ಪ್ರವಾಹ ಉಂಟಾಗಿದೆ.

ಮುಂಬಯಿಯಿಂದ ಶನಿವಾರ 60 ಕಿ.ಮೀ ದೂರದಲ್ಲಿರುವ ಪ್ರಯಾಣಿಕರ ರೈಲಿನಲ್ಲಿ ಪ್ರವಾಹದ ಮಧ್ಯೆ ಸಿಲಿಕಿರುವ ರೈಲಿನಲ್ಲಿ ಸುಮಾರು 200 ಸಾವಿರ ಜನರಿದ್ದಾರೆ ಎಂದು ತಿಳಿದು ಬಂದಿದೆ. ಈಗ ಅವರ ರಕ್ಷಣೆಗಾಗಿ ಎರಡು ಮಿಲಿಟರಿ ಹೆಲಿಕಾಪ್ಟರ್ಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಆರು ದೋಣಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಗಿಸಿಕೊಂಡಿವೆ. ಕಳೆದ 15 ಗಂಟೆಗಳಲ್ಲಿ ಪ್ರಯಾಣಿಕರಿಗೆ ನೀರು ಆಹಾರವಿಲ್ಲದೆ ಪರಾಡುತ್ತದ್ದು.
ಇನ್ನೊಂದೆಡೆಗೆ ಹೊರಗಡೆ ಅಪಾಯದ ನೀರಿನ ಮಟ್ಟ ಇರುವುದರಿಂದ ರೈಲ್ವೆ ಪ್ರಯಾಣಿಕರಿಗೆ ರೈಲಿನಿಂದ ಇಳಿಯದಿರಲು ಸೂಚಿಸಲಾಗಿದೆ. ಈಗ ಮಹಾರಾಷ್ಟ್ರ ಸಚಿವ ಏಕನಾಥ್ ಗಾಯಕ್ವಾಡ್ ಮಾತನಾಡಿ ‘ರಕ್ಷಣಾ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್ಗಳು ಸಹಾಯ ಮಾಡಲಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಅಥವಾ ಎನ್ಡಿಆರ್ಎಫ್ನ ಆರು ತಂಡಗಳು ಮುಂಬೈ, ಥಾಣೆ ಮತ್ತು ಪುಣೆಯಿಂದ ನೆಲಕ್ಕೆ ಉಬ್ಬಿಕೊಳ್ಳಬಲ್ಲ ರಬ್ಬರ್ ದೋಣಿಗಳೊಂದಿಗೆ ಸಹಾಯ ಮಾಡುತ್ತವೆ ಎಂದು ಹೇಳಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಪ್ರಯಾಣಿಕರನ್ನು ಈಗಾಗಲೇ ರಕ್ಷಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿಯಿಡೀ ಭಾರಿ ಮಳೆ ಮುಂದುವರಿದಿದ್ದರಿಂದ ಮುಂಬಯಿಯಲ್ಲಿ ವಾಯು ಮತ್ತು ರೈಲು ಸಂಚಾರಕ್ಕೆ ತೊಂದರೆಯಾಯಿತು. ಗೋಚರತೆಯ ಏರಿಳಿತದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 11 ವಿಮಾನಗಳನ್ನು ರದ್ದುಪಡಿಸಲಾಗಿದೆ. ಹಲವಾರು ವಿಮಾನಗಳನ್ನು ಸಹ ತಿರುಗಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos