ಸೌಥಾಂಪ್ಟನ್. ಜೂನ್.5, ನ್ಯೂಸ್ ಎಕ್ಸ್ ಪ್ರೆಸ್ : ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಮತ್ತು ದಕ್ಷಿಣ ಆಪ್ರೀಕಾ ತಂಡಗಳ ನಡುವೆ ಕೂತುಹಲ ಮೂಡಿದೆ. ದಕ್ಷಿಣ ಆಪ್ರಿಕಾದನ ವೇಗದ ಬೌಲರ್ ಕಗಿಸೋ ರಬಾಡ ಖಡಕ್ ಆಗಿ ಟೀ ಇಂಡಿಯಾ ಕ್ಯಾಷ್ಟನ್ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ‘ ಟೀ ಇಂಡಿಯಾ ಕ್ಯಾಷ್ಟನ್ ಕೊಹ್ಲಿ ಅಪ್ರಬುದ್ಧ, ಎದುರಾಳಿ ಆಟಗಾರ ತಿರುಗೇಟು ನೀಡಿದರೆ ಸಹಿಸಿಕೊಳ್ಳುವ ಶಕ್ತಿ ಇಲ್ಲ’ ಎಂದಿದ್ದರು. ಆ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕೊಹ್ಲಿ ದಕ್ಷಿಣ ಆಫ್ರಿಕಾ ವೇಗಿಗೆ ಖಡಕ್ ತಿರುಗೇಟು ನೀಡಿದ್ದಾರೆ. ರಬಾಡ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ‘ರಬಾಡ ಯಾಕೆ ಆ ರೀತಿ ಹೇಳಿದರು ಎಂದು ನನಗೆ ಗೊತ್ತಿಲ್ಲ. ಹಲವು ಪಂದ್ಯಗಳಲ್ಲಿ ನಾನು ಅವರ ವಿರುದ್ಧ ಆಡಿದ್ದೇನೆ. ಅವರಿಗೆ ಏನಾದರು ಸಮಸ್ಯೆಯಿದ್ದರೆ ಎದುರೆದುರು ಕೂತು ಚರ್ಚಿಸಲಿ. ಅವರ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ನಾನು ಉತ್ತರಿಸುವುದಿಲ್ಲ’ ಎಂದರು.
ವಿಶ್ವಕಪ್ ಟೂರ್ನಿಯಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತನ್ನ ಅಭಿಯಾನವನ್ನು ದಕ್ಷಿಣ ಆಫ್ರಿಕಾ ವಿರುದ್ಧವೇ ಆರಂಭಿಸಲಿದೆ. ಹೀಗಾಗಿ ಕೊಹ್ಲಿ ಬ್ಯಾಟಿಂಗ್ ಹಾಗೂ ರಬಾಡ ಬೌಲಿಂಗ್ ನಡುವಿನ ಹೋರಾಟ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.