ಬೆಂಗಳೂರು, ಮೇ 4, ನ್ಸೂಸ್ ಏಕ್ಸ್ ಪ್ರಸ್: ಟಿಕ್ಕಿ ಪತ್ನಿಯೊಬ್ಬರು ಏಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಗೂರಿನಲ್ಲಿ ನಡೆದಿದೆ. ಮೃತ ಪಟ್ಟವರನ್ನು ಸೀಮಾ ಸಿಂಗ್ ಎಂದು ಗುರುತಿಸಲಾಗಿದೆ. ಪುಪ್ಪೇಂದ್ರ ಎಂಬುವರನ್ನು ವಿವಾಹವಾಗಿದ್ದ ಸೀಮಾ ಸಿಂಗ್ ಮೂಲತ ಮಧ್ಯಪ್ರದೇಶದವರು ಎಂದು ತಿಳಿದು ಬಂದ್ದಿದೆ. ಕಳದ ಐದು ವರ್ಷಗಳ ಹಿಂದೆ ಈ ದಂಪತಿಗಳ ನಗರಕ್ಕೆ ಬಂದಿದ್ದರು ,ಎಸ್ಎನ್ಎನ್ ರಾಜ್ ಸಿಕ್ರೀನಿಟಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ದಂಪತಿಗಳಿಗೆ ಯಾವುದೇ ಮಕ್ಕಳಿರಲಿಲ್ಲ. ಸೀಮಾ ಹಾಗೂ ಪುಷ್ಪೇಂದ್ರರ ನಡುವೆ ಹೊಂದಾಣಿಕೆ ಇಲ್ಲದಿದ್ದ ಕಾರಣ ಅವರ ಮಧ್ಯೆ ಅಗಾಗ ಜಗಳವಾಗುತ್ತಿತು. ತಡರಾತ್ರಿ ಸುಮಾರಿಗೆ 12.30 ದಂಪತಿ ನಡುವೆ ಜಗಳವಾಗಿದೆ. ಇದರಿಂದ ತೀವ್ರ ಕೋಪಕ್ಕೆ ಒಳಗಾದ ಸೀಮಾ ತಮ್ಮ ಮನೆಯ ಬಾಲ್ಕನಿಗೆ ತೆರಳಿ ಮಹಡಿಯಿಂದ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.